ಪ್ರೊ ಕೆ ಆರ್ ಹಂದೆ ಸಂಸ್ಮರಣ ಉಪನ್ಯಾಸ

ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಈಚೆಗೆ ಪ್ರೊ ಕೆ.ಆರ್.ಹಂದೆ ಸಂಸ್ಮರಣ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಉಡುಪಿಯ ಬಳಕೆದಾರರ ವೇದಿಕೆಯ ಸಂಚಾಲಕ ಶ್ರೀ ಎ.ಪಿ.ಕೊಡಂಚ ಅವರು ‘ ಶಾಲೆಗಳಲ್ಲಿ ಗ್ರಾಹಕ ಸಂಘಗಳು’ ಎಂಬ ವಿಷಯವನ್ನು ಕುರಿತು ಉಪನ್ಯಾಸ ನೀಡಿದರು.ಗ್ರಾಹಕ ಸಂಘಗಳ ಸ್ಥಾಪನೆಯ ಉದ್ದೇಶ,ಸದಸ್ಯತ್ವ,ಚಟುವಟಿಕೆಗಳು,ಸರಕಾರದಿಂದ ದೊರೆಯುವ ಅನುದಾನ,ಶಿಕ್ಷಕಸಂಚಾಲಕರ ಕರ್ತವ್ಯಗಳು ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲಿದರಲ್ಲದೆ ವಿದ್ಯಾರ್ಥಿ ಸದಸ್ಯರಲ್ಲಿ ಮೂಡಿದ ಗ್ರಾಹಕ ಜಾಗೃತಿಯ ಬಗ್ಗೆಯೂ ನಿದರ್ಶನಗಳನ್ನು ನೀಡಿದರು.2019 ರಿಂದ ಈಚೆಗೆ ಬಂದಿರುವ ಹೊಸ ಗ್ರಾಹಕ ರಕ್ಷಣಾ ಕಾನೂನು ಹೆಚ್ಚು ಗ್ರಾಹಕ ಸ್ನೇಹಿಯಾಗಿದ್ದು ಪ್ರಬಲವಾಗಿಧ ಎಂದು ನುಡಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರೂ ಡಾ ಟಿಎಂಎ ಪೈ ಮಾನವ ಸಂಪದಭಿವೃದ್ಧಿ ಕೇಂದ್ರದ ನಿರ್ದೇಶಕರೂ ಆಗಿದ್ದ ದಿ ಪ್ರೊ ಕೆ ಆರ್ ಹಂದೆಯವರು ಶಿಕ್ಷಕರ ಶಿಕ್ಷಣಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿಕೊಂಡು ಅವರು ಬರೆದಿರುವ ಶೈಕ್ಷಣಿಕ ಮಹತ್ವದ ಕೃತಿಗಳನ್ನು ವಿದ್ಯಾರ್ಥಿ ಶಿಕ್ಷಕರು ಮನ‌ನ ಮಾಡಬೇಕೆಂದು ಕರೆ ನೀಡಿದರು.ಶ್ರೀ ಮತಿ ಧನಲಕ್ಷ್ಮಿ ಸ್ವಾಗತಿಸಿದರೆ ಶ್ರೀ ಮತಿ ಪ್ರೀತಿ. ಎಸ್ ರಾವ್ ಆಭಾರ ಮನ್ನಿಸಿದರು.ಶ್ರೀ ಮತಿ ಮಮತಾ ಸಾಮಂತ್ ಸಂಪನ್ಮೂಲ ವ್ಯಕ್ತಿಗಳನ್ನು ಸಭೆಗೆ ಪರಿಚಯಿಸಿದರು.ಶ್ರೀ ಮತಿ ರೂಪಾ.ಕೆ.ಸ್ಮರಣಿಕೆ ನೀಡಿದರು.

 
 
 
 
 
 
 
 
 
 
 

Leave a Reply