ಗುಂಡ್ಮಿ-ಮೊಗವೀರ ಗ್ರಾಮಸಭೆ

ಕೋಟ: ಗುಂಡ್ಮಿ ಆಲಿತೋಟ ಮೊಗವೀರ ಗ್ರಾಮಸಭೆಯು ಜೂ.೧೫ರಂದು ಶ್ರೀ ಲಕ್ಷಿ÷್ಮಸೋಮ ಬಂಗೇರ ಸಭಾಭವನ ಗುಂಡ್ಮಿ ಇಲ್ಲಿ ಜರಗಿತು.

 ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಸಮುದಾಯದ ಅಧ್ಯಕ್ಷ ರಾಜು ಅಮೀನ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮೊಗವೀರ ಗ್ರಾಮಸಭೆ ವ್ಯಾಪ್ತಿಯಲ್ಲಿ ಹತ್ತನೇ ತರಗತಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿ ಗಳಾದ ಶರಣ್ಯ, ಶಮನ, ದಿವ್ಯಶ್ರೀ, ಮತ್ತು ಭೂಮಿಕಾ ಇವರುಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

 ಮುಖ್ಯ ಅತಿಥಿಗಳಾಗಿ ಗ್ರಾಮ ಸಭೆ ಗೌರವಾಧ್ಯಕ್ಷ ಶಿವ ಎಸ್ ಕರ್ಕೇರ ಹಾಗೂ ಬೆಣ್ಣೆಕುದ್ರು ಸಂಯುಕ್ತ ಸಭಾದ ಅಧ್ಯಕ್ಷ ಸತೀಶ್ ಅಮೀನ್, ಸಾಲಿಗ್ರಾಮ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ಚಂದ್ರ ಬಂಗೇರ, ಗ್ರಾಮಸಭೆಯ ಗುರಿಕಾರ ನರಸಿಂಹ ಕುಂದರ್, ನಿವೃತ್ತ ಸೇನಾ ಸಿಬ್ಬಂದಿ ವಿನೋದ ಕುಮಾರ್ ಉಪಸ್ಥಿತರಿದ್ದರು.

ಗ್ರಾಮಸಭೆಯ ಕಾರ್ಯದರ್ಶಿ ದಿನೇಶ್ ಬಂಗೇರ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.

 
 
 
 
 
 
 
 
 
 
 

Leave a Reply