ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಇತ್ತೀಚೆಗೆ
ಸುಧೀರ್ಘ ಕಾಲ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಪ್ರೊ.
ರಾಮರಾಯ ಆಚಾರ್ಯ, ಪ್ರೊ. ಶ್ರೀಧರ್ ಭಟ್, ಡಾ. ರೋಶನ್
ಕುಮಾರ್ ಶೆಟ್ಟಿ ಮತ್ತು ಉಡುಪಿಯ ಲೀಡ್ ಕಾಲೇಜಿನ
ಪ್ರಾಂಶುಪಾಲರಾಗಿ ನಿವೃತ್ತ ಹೊಂದಿದ ಡಾ. ಗಣನಾಥ್ ಶೆಟ್ಟಿ ಎಕ್ಕಾರು
ಇವರನ್ನು ಅಧ್ಯಾಪಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ. ಗಣನಾಥ ಶೆಟ್ಟಿ ಎಕ್ಕಾರು ಅವರು
ಪ್ರಾದ್ಯಾಪಕರ ಸೇವೆಯ ಮಹತ್ವವನ್ನು ಸ್ಮರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಭಾಸ್ಕರ್
ಶೆಟ್ಟಿ ಎಸ್. ವರ್ಗಾವಣೆಗೊಂಡ ಪ್ರಾದ್ಯಾಪಕರ ಕರ್ತವ್ಯ
ಪ್ರಜ್ಞೆಯನ್ನು ಸ್ಮರಿಸಿದರು. ಡಾ. ರಾಮದಾಸ ಪ್ರಭು
ಅತಿಥಿಗಳನ್ನು ಸ್ವಾಗತಿಸಿದರೆ, ರಮಾಕಾಂತ ಪುರಾಣಿಕ್ರು
ಧನ್ಯವಾದ ಸಮರ್ಪಣೆಗೈದರು. ಕಾರ್ಯಕ್ರಮ
ನಿರ್ವಹಣೆಯಲ್ಲಿ ಪ್ರೊ. ಕೇಶವ ಮೂರ್ತಿ ಸಹಕರಿಸಿದರು.