ಮುಂಬರುವ ದಿನಗಳಲ್ಲಿ ವಿಜ್ಞಾನ ಮತ್ತು ಕಲೆಗಳ ಸಮ್ಮಿಲನದಿಂದ ಶಿಕ್ಷಣವು ಹೆಚ್ಚು ಹೆಚ್ಚು ಅಂತರ ಶಿಸ್ತಿಯವಾಗಲಿದೆ~ ಡಾ.ಎಚ್.ವಿನೋದ್ ಭಟ್

ಮಾಹೆಯ ಗಾಂಧಿಯನ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್‌ನ ವಾರ್ಷಿಕೋತ್ಸವ ‘ಸರ್ವೋದಯ’ ದಲ್ಲಿ ಮಾತನಾಡಿದ ಅವರು, ಉದಾರ ಕಲೆ ಮತ್ತು ಸಮಾಜಶಾಸ್ತ್ರೀಯ ವಿಷಯಗಳು ಮುಂದಿನ ದಿನಗಳಲ್ಲಿ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣದಲ್ಲೂ ಹೆಚ್ಚಿನ ಮಹತ್ವವನ್ನು ಕಂಡುಕೊಳ್ಳಲಿದೆ . (೨೦೨೧ ರ ರಾಷ್ಟ್ರೀಯ ಶಿಕ್ಷಣ ನೀತಿಯೂ ಇದೇ ದೃಷ್ಟಿಕೋನವನ್ನು ಅನುಮೋದಿಸುತ್ತದೆ ಮತ್ತು ಪ್ರತಿಪಾದಿಸುತ್ತದೆ). ಇಂತಹ ಸನ್ನಿವೇಶದಲ್ಲಿ ಮಾಹೆಯ ಜಿಸಿಪಿಎಎಸ್ ಒದಗಿಸುತ್ತಿರುವ ಕೋರ್ಸ್‌ಗಳು ಬಹಳಷ್ಟು ಮಹತ್ವವನ್ನು ಪಡೆಯುತ್ತವೆ ಮತ್ತು “ನಮ್ಮ ವಿಶ್ವವಿದ್ಯಾನಿಲಯವು ನಿಮ್ಮ ಕಲಿಕಾ ವಿಷಯಗಳಿಂದಲೇ ತನ್ನ ಶ್ರೇಷ್ಠತೆಯನ್ನು ಪಡೆದುಕೊಂಡಿದೆ” ಎಂದರು.

ಸಂಸ್ಥೆಯಿಂದ ಹೊರಬರುವ ಅನೇಕ ‘ಬಹುಮುಖಿ ಪ್ರತಿಭೆಗಳನ್ನು’ ಗಳನ್ನು ಕಂಡುಕೊಳ್ಳುವ ಆಶಯದೊಂದಿಗೆ, ಡಾ. ಭಟ್ ಅವರು, ಸ್ವಾತಂತ್ರ್ಯ ಹೋರಾಟ ಮತ್ತು ಗಾಂಧಿ ಚಳುವಳಿಯ ಭಾಗವಾಗಿದ್ದು, ನಾವು ಕಡಿಮೆ ಅರಿತಿರುವ ವ್ಯಕ್ತಿಗಳ (ಈ ಪ್ರದೇಶದ ಉಮಾಬಾಯಿ ಕುಂದಾಪುರದಂತಹ) ಬಗ್ಗೆ ಸಂಶೋಧನೆ ಮತ್ತು ಬರೆಯಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು, ಇದರಿಂದ ಇತಿಹಾಸವೂ ಶ್ರೀಮಂತವಾಗಲಿದೆ ಎಂದು ಅವರು ಆಶಿಸಿದರು.

ಮಾಹೆಯಲ್ಲಿ ಕುಲಪತಿಯಾಗಿ ಮತ್ತು ಅನೇಕ ಇತರ ಹುದ್ದೆಗಳನ್ನು ನಿರ್ವಹಿಸಿದ್ದ ಡಾ. ವಿನೋದ್ ಭಟ್ ಅವರ ಅಪಾರ ಕೊಡುಗೆಯನ್ನು ಸ್ಮರಿಸಿ ಇದೇ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು. ಅವರು ಮಾಹೆಯ ಕುಲಪತಿಯಾಗಿದ್ದಾಗ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದಿಂದ ವಿಶ್ವವಿದ್ಯಾಲಯವು ತನ್ನ ‘ಇನ್‌ಸ್ಟಿಟ್ಯೂಷನ್ ಆಫ್ ಎಮಿನೆನ್ಸ್’ ಪಟ್ಟವನ್ನು ಪಡೆದಿರುವುದನ್ನು ಸ್ಮರಿಸಬಹುದು.

ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ, ಪರಿಸರಶಾಸ್ತ್ರ, ಸೌಂದರ್ಯಶಾಸ್ತ್ರ ಮತ್ತು ಶಾಂತಿ ಜಿಸಿಪಿಎಎಸ್ ಕೋರ್ಸ್‌ಗಳ ತಾತ್ವಿಕ ನೆಲೆಗಳಾಗಿವೆ ಮತ್ತು ಮಾಧ್ಯಮಗಳು ಇವುಗಳ ಅಭಿವ್ಯಕ್ತಿ ಮಾಧ್ಯಮವಾಗಿದೆ. ಒಟ್ಟಾರೆಯಾಗಿ ಮಾಹೆಗೆ ಮತ್ತು ನಿರ್ದಿಷ್ಟವಾಗಿ ಜಿಸಿಪಿಎಎಸ್ ಗೆ ಡಾ ಭಟ್ ಅವರ ಕೊಡುಗೆಯನ್ನು ಅವರು ಶ್ಲಾಘಿಸಿದರು.

ಸರ್ವೋದಯ- ವಾರ್ಷಿಕೋತ್ಸವವು, ಬಿಎ (ಎಸ್ಥೆಟಿಕ್ಸ್ ಅಂಡ್ ಪೀಸ್ ಸ್ಟಡೀಸ್), ಎಂಎ (ಇಕಾಸೊಫಿಕಲ್ ಎಸ್ಥೆಟಿಕ್ಸ್) ಮತ್ತು ಎಂಎ (ಆರ್ಟ್ ಅಂಡ್ ಪೀಸ್ ಸ್ಟಡೀಸ್) ವಿದ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಕಳೆಗೊಂಡಿತು. ಇದೇ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಮತ್ತು ಅನುಭವಗಳನ್ನು ಹಂಚಿಕೊಂಡರು.

 
 
 
 
 
 
 
 
 
 
 

Leave a Reply