ಕಲ್ಯಾಣಪುರ ಗ್ರಾಮದಲ್ಲಿ ನಿರಂತರವಾಗಿ ಗೋವು ಕಳ್ಳತನ ಮತ್ತು ಗೋಹತ್ಯೆ ನಡೆಯತ್ತಿದು ಇದನ್ನು ಖಂಡಿಸಿ, ಕಲ್ಯಾಣಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣ ದೇವಾಡಿಗ ನೇತೃತ್ವದಲ್ಲಿ ಮಾನ್ಯ ಶಾಸಕರಾದ ಕೆ ರಘುಪತಿ ಭಟ್ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಈ ಮನವಿಗೆ ಶಾಸಕರು ಕೊಡಲೇ ಸ್ಪಂದಿಸಿ ಮಾನ್ಯ ಗ್ರಹ ಸಚಿವರು ಹಾಗು ಪೊಲೀಸ್ ಇಲಾಖೆಗೂ ತಿಳಿಸಿಸುವೆ ಎಂದು ಭರವಸೆ ಕೊಟ್ಟಿರುತ್ತಾರೆ .
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಉದಯ ಪೂಜಾರಿ, ಮಾಜಿ ಅಧ್ಯಕ್ಷ ಸತೀಶ್ ನಾಯ್ಕ್ ಪಂಚಾಯತ್ ಸದ್ಯಸರುಗಳಾದ ನವೀನ್ ಕಾಂಚನ, ನಾಗರಾಜ್ ಕುಂದರ್, ಪ್ರಶಾಂತ್ ಆಚಾರ್ಯ ಮಾಜಿ ಸದ್ಯಸ ಉಮೇಶ್ ಅಮೀನ್ ಉಪಸ್ಥಿತರಿದ್ದರು