ಉದಯಪುರದಲ್ಲಿ ಕನ್ನಯ್ಯಲಾಲ್ ಎಂಬಾತನ ಶಿರಚ್ಛೇದನ ಮಾಡಿ ಹತ್ಯೆಮಾಡಿದ ಘಟನೆಯು ಇಡೀ ದೇಶವನ್ನೇ ತಲೆತಗ್ಗಿಸುವಂತೆ ಮಾಡಿದೆ. ಸಂಸದೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ ಎನ್ನುವ ಕ್ಷುಲ್ಲಕ ಕಾರಣಕ್ಕೆ ಟೈಲರ್ ವೃತ್ತಿ ನಿರತ ವ್ಯಕ್ತಿಯೊಬ್ಬನನ್ನು ಅಮಾನವೀಯವಾಗಿ ಹತ್ಯೆಗೈದಿರುವ ಕ್ರೂರ ಕೃತ್ಯವನ್ನು ಪ್ರತೀಯೊಬ್ಬ ಭಾರತೀಯನೂ ಖಂಡಿಸಲೇಬೇಕು ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಳೆ ಹೇಳಿದ್ದಾರೆ.
ಎಲ್ಲರಿಗೂ ಅವರವರದೇ ಆದ ಅಭಿಪ್ರಾಯಗಳು ಹಾಗೂ ಅಭಿರುಚಿ ಗಳಿರುತ್ತವೆ.ಅವುಗಳನ್ನು ವ್ಯಕ್ತಪಡಿಸಲು ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ.ಹಾಗಿರುವಾಗ ಇದನ್ನೇ ಒಂದು ದ್ವೇಷದ ಬೆಂಕಿಯನ್ನಾಗಿಸಿಕೊಂಡು ಒಬ್ಬ ವ್ಯಕ್ತಿಯ ಕೊಲೆಯಲ್ಲಿ ಅಂತ್ಯ ಕಾಣುವುದು ಎಷ್ಟು ಸರಿ? ಇದಕ್ಕೆಲ್ಲ ಕಾರಣ ಧರ್ಮಾಂಧ ಮನಸ್ಸುಗಳು.ಧರ್ಮದ ಅಮಲಿನಲ್ಲಿ ಇಂತಹ ಹೇಯ ಕೃತ್ಯವನ್ನು ಎಸಗಿದವರ ಮೇಲೆ ತಕ್ಷಣ ಕ್ರಮ ಕೈಗೊಂಡು ಅಂತಹವರಿಗೆ ಕಠಿಣ ಶಿಕ್ಷೆಗೊಳಪಡಿಬೇಕು.ಹಾಗೂ ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸಬಾರದು ಎಂದು ಗೀತಾ ವಾಗ್ಳೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.