ಗಂಗೊಳ್ಳಿ ಬೆಂಕಿ ಅವಗಢದಿಂದ ಮನೆ ಸಮೇತ ಸಜೀವ ದಹನಗೊಂಡ ಗಣೇಶ್ ಖಾರ್ವಿ ಕುಟುಂಬದೊಂದಿಗೆ ಜಮಾಅತೆ ಇಸ್ಲಾಮಿ ಹಿಂದ್, ನಿಯೋಗ ಭೇಟಿ

ಇತ್ತಿಚೆಗೆ ಗಂಗೊಳ್ಳಿಯಲ್ಲಿ ಬೆಂಕಿ ಅವಗಢದಿಂದ ಮನೆ ಸಮೇತ ಸಜೀವ ದಹನಗೊಂಡು ಸಾವಿಗೀಡಾದ ಮೀನುಗಾರ ಸಮುದಾಯದ 43ವರ್ಷ ಪ್ರಾಯದ ಗಣೇಶ್ ಖಾರ್ವಿ ಅವರ ಕುಟುಂಬಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ನಿಯೋಗ ಬೇಟಿ ನೀಡಿತು. ಮನೆ ಸುಟ್ಟು ಕರಕಲಾಗಿದ್ದ ಕಾರಣ ಅವರ ಕುಂಟುಂಬ ಮೃತರ ಸಹೋದರನ ಮನೆಯಲ್ಲಿ ವಾಸಿಸುತ್ತಿದ್ದರು. ನಿಯೋಗ ಮೃತರ ಸಹೋದರ, ಮೃತರ ಪತ್ನಿ ಹಾಗೂ ಕುಟುಂಬಸ್ಥರೊಂದಿಗೆ ಮಾತನಾಡಿ ಆಗಿರುವ ಅವಗಢದಲ್ಲಿ ಮನೆ ಆಧಾರಸ್ತಂಭ ಗಣೇಶ್ ಖಾರ್ವಿ ಅವರ ನಿಧನರಾಗಿದ್ದಲ್ಲದೆ ಮನೆಯೊಂದಿಗೆ ಸರ್ವ ವಸ್ತುಗಳು ನಷ್ಟಗೊಂಡ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿತು. ನಿಯೋಗದಲ್ಲಿದ್ದ ಸ್ಥಾನೀಯ ಜಮಾಅತೆ ಇಸ್ಲಾಮಿ ಹಿಂದ್’ನ ಪ್ರಮುಖರಾದ ಮಹಮ್ಮದ್ ಅಶ್ರಫ್ , ಇಕ್ಬಾಲ್ ಗಂಗೊಳ್ಳಿ, ಇಬ್ರಾಹಿಂ ಚೌಗುಲೆ ಹಾಗೂ ಇತರರು ಕುಟುಂಬದ ಸದಸ್ಯರೊಂದಿಗೆ ಸಾಂತ್ವನದ ಮಾತುಗಳನ್ನಾಡಿ ಅವರ ದುಃಖದ ಸಮಯದಲ್ಲಿ ಜೊತೆಗಿರುವುದಾಗಿ ಹೇಳಿತು. ಈ ಸಂದರ್ಭದಲ್ಲಿ ನಿಯೋಗವು ಕುಟುಂಬಕ್ಕೆ ಪ್ರಾಥಮಿಕ ಸಹಾಯವನ್ನು ನೀಡಿತು. ಸಂಬಂಧ ಪಟ್ಟ ಇಲಾಖೆಯಿಂದ ಮೃತರ ಕುಟುಂಬಕ್ಕೆ ಪರ್ಯಾಪ್ತ ಪರಿಹಾರ ಒದಗಿಸಬೇಕೆಂದು ನಿಯೋಗವು ಆಗ್ರಹಿಸಿದೆ.

.

 
 
 
 
 
 
 
 
 
 
 

Leave a Reply