ಎಂ. ಗಂಗಾಧರ ರಾವ್ ರಿಂದ ಸಂಕಷ್ಟದಲ್ಲಿರುವ ಕಲಾವಿದನಿಗೆ ಸ್ವಂತ ನೆಲೆಯಲ್ಲಿ ಆರ್ಥಿಕ ಸಹಾಯ

14-07-2022: ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ನೇತೃತ್ವದ ತಂಡ ನೀರ್ಜಡ್ಡು ಆಸುಪಾಸಿನ ಪ್ರದೇಶದಲ್ಲಿ ವಿದ್ಯಾಪೋಷಕ್ ಮನೆಭೇಟಿ ನೀಡುತ್ತಿದ್ದ ಸಂದರ್ಭದಲ್ಲಿ ಮಡಾಮಕ್ಕಿ ಮೇಳದ ಮದ್ದಲೆವಾದಕ (ವಿಕಲಚೇತನ ಕಲಾವಿದ) ವಿಜಯ ನಾಯ್ಕ ನೀರ್ಜಡ್ದು ಇವರ ಮನೆಗೆ ಭೇಟಿ ನೀಡಿ ಸಂಕಷ್ಟದಲ್ಲಿರುವ ಕಲಾವಿದನಿಗೆ ಸ್ವಂತ ನೆಲೆಯಲ್ಲಿ ಆರ್ಥಿಕ ಸಹಾಯ ನೀಡಿ ಪ್ರೋತ್ಸಾಹಿಸಿದ್ದಾರೆ.

ಮಡದಿ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಈರ್ವರು ಮಕ್ಕಳನ್ನು ಹೊಂದಿರುವ ಇವರ ಮನೆಯೂ ತೀರ ದುಸ್ಥಿಯಲ್ಲಿದೆ. ಈ ಕಲಾವಿದ ಪ್ರತಿದಿನ ಭಾಗತರಾದ ಬಸವರಾಜ್ ಇವರ ಬೈಕ್‍ನಲ್ಲಿ ಮೇಳಕ್ಕೆ ಹೋಗಿ ಕಲಾಸೇವೆಗೈಯುತ್ತಿದ್ದಾರೆ. ತೀವ್ರ ಸಂಕಷ್ಟದಲ್ಲಿರುವ ಈ ಕಲಾವಿದನಿಗೆ ಸರ್ವರೀತಿಯ ನೆರವು ನೀಡುವುದು ಸಂಸ್ಥೆಯ ಆದ್ಯ ಕರ್ತವ್ಯವಾಗಿದೆ.ಮುಂದಿನ ದಿನಗಳಲ್ಲಿ ಸಂಸ್ಥೆ ಕಾರ್ಯಪ್ರವೃತ್ತವಾಗಲಿದೆ.

 
 
 
 
 
 
 
 
 

Leave a Reply