ಅಯೋಧ್ಯೆಯಲ್ಲಿ ರಾಮಮಂದಿರದ ಶೀಲಾನ್ಯಾಸ ಮಾಡುವ ಸಮಯದಲ್ಲಿ ಶ್ರೀಕೃಷ್ಣಮಠ ಪರ್ಯಾಯ ಶ್ರೀಅದಮಾರು ಮಠದ ಗೋಶಾಲೆಯ ದೇಸಿ ದನ ಕಪಿಲೆಯು ಗಂಡು ಕರುವಿಗೆ ಜನ್ಮ ನೀಡಿದೆ.
ಕಾಕತಾಳಿಯ ಎಂಬಂತೆ ಶ್ರೀಗಳವರ ಅಚ್ಚುಮೆಚ್ಚಿನ ಮಣ್ಣಿನ ಬಣ್ಣ ಕರು ಇದಾಗಿದ್ದು ಪರ್ಯಾಯ ಅದಮಾರು ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಈ ಕರುವಿಗೆ ಶ್ರೀರಾಮ ಎಂದು ನಾಮಕರಣ ಮಾಡಿರುತ್ತಾರೆ.