ಶ್ರದ್ಧೆ, ಏಕಾಗ್ರತೆಯೊಂದಿಗೆ ಕಲಿಯುತ್ತಾ,ವ್ಯವಸ್ಥಿತ ಪೂರ್ವ ತಯಾರಿಯೊಂದಿಗೆ ಪರೀಕ್ಷೆಯನ್ನು ಎದುರಿಸಿದರೆ ಉತ್ತಮ ಅಂಕ ಪಡೆಯಲು ಸಾದ್ಯ ಎಂದು ಉಡುಪಿ ಡಯಟ್ ಉಪನ್ಯಾಸಕ ಶ್ರೀ ಯೋಗನರಸಿಂಹ ಸ್ವಾಮಿ ತಿಳಿಸಿದ್ದಾರೆ.
ಅವರು ಹಿರಿಯಡ್ಕ ಸರಕಾರಿ ಪ ಪೂ ಕಾಲೇಜಿನ ಪ್ರೌಢಶಾಲಾ ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ಅನಂತ ಚೇತನ ಟ್ರಸ್ಟ್ ವತಿಯಿಂದ ಪರೀಕ್ಷಾ ಪೂರ್ವ ತಯಾರಿಯ ಕುರಿತು ನಡೆದ ಕಾರ್ಯಾಗಾರದಲ್ಲಿ ಮಾತನಾಡುತ್ತಾ ಶಿಸ್ತಿನ ಕಲಿಕಾ ವಿಧಾನವೇ ಸಾಧನೆಗೆ ಪೂರಕ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲ ಮಂಜುನಾಥ ಭಟ್ ಉಪ ಪ್ರಾಂಶುಪಾಲೆ ಕುಸುಮಾ, ಅನಂತ ಚೇತನ ಟ್ರಸ್ಟ್ ನ ಪದಾಧಿಕಾರಿಗಳಾದ ಡಾ ಗೀತಾ ಮಯ್ಯ,ವಿಶ್ವನಾಥ ಬಾಯರಿ, ಶಿಲ್ಪಾ ಜೋಷಿ ಶಿಕ್ಷಕರಾದ ವಿಜಯಕುಮಾರ್, ಮೋಹನ ಕಡಬ ಉಪಸ್ಥಿತರಿದ್ದರು..