ಟಿ.ಎ.ಪೈ ಹೈಸ್ಕೂಲ್: ರಕ್ಷಕ ಶಿಕ್ಷಕ ಸಂಘದ ಮಹಾಸಭೆ

ಉಡುಪಿ ಕುಂಜಿಬೆಟ್ಟಿನ ಟಿ.ಎ.ಪೈ ಇಂಗ್ಲಿಷ್ ಮೀಡಿಯಂ ಹೈಸ್ಕೂಲಿನ ರಕ್ಷಕ ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆಯು ಜರಗಿತು.

ಶಿಕ್ಷಕಿ ಶ್ರೀಮತಿ ಮೃದುಲಾ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಮಂಜುನಾಥ್ ಎ. ವಿ ಸಂದರ್ಭೊಚಿತವಾಗಿ ಮಾತನಾಡಿದರು. ಶಿಕ್ಷಕಿ ಶ್ರೀಮತಿ ರೂಪಶ್ರೀ ಅವರು ಗತವರ್ಷದ ಚಟುವಟಿಕೆಗಳ ವರದಿ ವಾಚಿಸಿದರು.

ಶ್ರೀಮತಿ ಜಯಶ್ರೀ ಅವರು ಪರಿಶೋಧಿತ ಲೆಕ್ಕ ಪತ್ರಗಳು, ಪ್ರಸಕ್ತ ವರ್ಷದ ಆಯವ್ಯಯ ಪಟ್ಟಿಯನ್ನು ಸಭೆಯಲ್ಲಿ ಮಂಡಿಸಿದರು. ಶ್ರೀಮತಿ ಸವಿತಾ ಅವರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಶ್ರೀಮತಿ ವಿನೋದಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ಅರುಣಾ ಕುಮಾರಿ ವ೦ದನಾರ್ಪಣೆಗೈದರು.

ಪ್ರಚಲಿತ ವರ್ಷದ ಅಧ್ಯ್ಯಕ್ಷ ಶ್ರೀ ನಾಗೇಶ್ ಶೇಟ್ ಅವರನ್ನು ಪುನರ್ ಆಯ್ಕೆ ಮಾಡಲಾಯಿತು. ಶ್ರೀಮತಿ ಆಶಾ ಶೆಟ್ಟಿ ಅವರನ್ನು ಉಪಾಧ್ಯಕ್ಷರನ್ನಾಗಿ ಆರಿಸಲಾಯಿತು.

ಇತರ ಪದಾಧಿಕಾರಿಗಳಾದ ಶ್ರೀಮತಿ ನಾಗರೇಖಾ, ಶ್ರೀಮತಿ ಸೀಮಾ ಪೈ, ಶ್ರೀ. ಮಿಥನ್ ಶೆಣೈ, ಶ್ರೀಮತಿ ರವೀಂದ್ರ ಶೆಣೈ,ಶ್ರೀ ರಮೇಶ್ ಭಟ್ ಕೆ, ಶ್ರೀಮತಿ ವಿನೋದಾ ಶೆಟ್ಟಿ( ಕಾರ್ಯಕಾರಿ ಮಂಡಳಿಯ ಸದಸ್ಯರು) ಶ್ರೀಮತಿ ಜಾಹ್ನವಿ ಶೆಣೈ(ಲೆಕ್ಕ ಪರಿಶೋಧಕರು) ಇವರನ್ನು ಆಯ್ಕೆ ಮಾಡಲಾಯಿತು.

 
 
 
 
 
 
 
 
 
 
 

Leave a Reply