ಎಲ್ಲಾ ಅನುಕಂಪದಲ್ಲಿ ಹಣದ ಅನಿವಾರ್ಯತೆ ಇರುವುದಿಲ್ಲ~ ಡಾ.ಶಶಿಕಿರಣ್ ಶೆಟ್ಟಿ

ಕ್ಯಾನ್ಸರ್ ಒಕ್ಕರಿಸಿತ್ತು ಅವನ ಹೆಂಡತಿಗೆ.. ಎಲ್ಲರ ಅನುಕಂಪ ಬಿದ್ದಿತ್ತು ಅವನ ಮೇಲೆ. ಯಾರೋ ಒಂದೊಳ್ಳೆ ಸೆಂಟಿಮೆಂಟಲ್ ಬರಹ ಬರೆದು ವೈರಲ್ ಮಾಡಿದರು ಆತನ ಅಕೌಂಟ್ ನಂಬರ್ ಹಾಕಿ. ವಿಷಯ ವೈರಲ್ ಆಗಿತ್ತು.

ಒಂದೆರಡು ದಿನದಲ್ಲಿ 18 ಲಕ್ಷ ಸಂಗ್ರಹವಾಗಿತ್ತು. ಆತ ತನ್ನ ಒಂದು ಕೋಟಿ ಮೌಲ್ಯದ ಆಡಿ ಕಾರ್ ಅಲ್ಲಿ ಬ್ಯಾಂಕಿಗೆ ಬಂದು 10 ಲಕ್ಷ ವಿಥ್ಡ್ರಾವಾಲ್ ಮಾಡಿ ಹೋಗಿದ್ದ.

ನಿಜ ಕ್ಯಾನ್ಸರ್ ಮಹಾ ಮಾರಿ. ಅದು ಬಡವನಿಗೆ ಬಂದರಷ್ಟೇ ಅಕೌಂಟ್ ಗೆ ಹಣ ಹಾಕಿ, ಅದುಬಿಟ್ಟು ಯಾರೇನೋ ಬರೆದರು ಎಂದು, ಓದಿ ಕಣ್ಣಲ್ಲಿ ನೀರು ಬಂತೆಂದು ಅಕೌಂಟ್ ಗೆ ಒಂದಿಷ್ಟು ಹಾಕುವ ಮನಸ್ಥಿತಿ ನಿಮ್ಮದಿದ್ದರೆ ಇಂದೇ ಬದಲಾಗಿ, ನಿಮ್ಮ ದುಡಿದ ಹಣ ಸತ್ಪಾತ್ರರಿಗಷ್ಟೇ ಸಲ್ಲಲಿ…ನೆನಪಿಡಿ.

ಎಲ್ಲಾ ಅನುಕಂಪದಲ್ಲಿ ಹಣದ ಅನಿವಾರ್ಯತೆ ಇರುವುದಿಲ್ಲ.

 
 
 
 
 
 
 
 
 
 
 

Leave a Reply