ಉಡುಪಿ: ಮೇ 31ರಂದು ನಿವೃತ್ತರಾಗುತ್ತಿ ರುವ ಡಾ. ಸುಧೀರ್ಚಂದ್ರ ಸೂಡ ಅವರ ಸ್ಥಾನಕ್ಕೆ ಕುಂದಾಪುರ ತಾಲೂಕು ಆರೋಗ್ಯಾ ಧಿಕಾರಿಯಾಗಿರುವ ಡಾ.ನಾಗಭೂಷಣ ಉಡುಪ ಅವರನ್ನು ಉಡುಪಿ ಜಿಲ್ಲೆಯ ನೂತನ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಯಾಗಿ (ಡಿಎಚ್ಓ) ನೇಮಿಸಲಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿಗಳ ಆದೇಶದಲ್ಲಿ ತಿಳಿಸಲಾಗಿದೆ.
ಡಾ.ನಾಗಭೂಷಣ ಉಡುಪ ಅವರು ಇದೇ ಮೇ 31ರಂದು ಡಾ.ಸೂಡರಿಂದ ಅಧಿಕಾರ ಸ್ವೀಕರಿ ಸಲಿದ್ದಾರೆ ಎಂದು ತಿಳಿದುಬಂದಿದೆ.