ವಿನಯ ಕುಲಕರ್ಣಿಗೆ ಜನ್ಮದಿನದ ಶುಭಾಶಯ ಕೋರಿ ವಶಕ್ಕೆ ಪಡೆದುಕೊಂಡ ಸಿಬಿಐಅಧಿಕಾರಿಗಳು 

ಯೋಗೀಶ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದು ಕೊಂಡರು.  ನಿನ್ನೆ ಹಿಂಡಲಗಾ ಜೈಲಿಗೆ ವಿನಯ್ ಕುಲಕರ್ಣಿ ಶಿಫ್ಟ್ ಆಗಿದ್ದು, ಮೂರು ದಿನಗಳವರೆಗೆ ಸಿಬಿಐ ವಶದಲ್ಲಿ ಇರಲಿದ್ದಾರೆ.
ಇಂದು ವಿನಯ್ ಕುಲಕರ್ಣಿ ಹುಟ್ಟಿದ ಹಬ್ಬ , ಸಿಬಿಐ ಅಧಿಕಾರಿಗಳು ಬರ್ತ್ಡೇ ವಿಶ್ ಮಾಡಿ ನಂತರ ವಿಚಾರಣೆಗೆ ಪಡೆದಿದ್ದಾರೆ. ಇಂದು ಬೆಳಗ್ಗೆ ಹಿಂಡಲಗಾ ಕಾರಾಗೃಹಕ್ಕೆ ಆಗಮಿಸಿದ್ದು, ವಶಕ್ಕೆ ಪಡೆದುಕೊಳ್ಳಲು ಬೇಕಾದ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ವಶಕ್ಕೆ ಪಡೆದಿದ್ದಾರೆ.
 
 
 
 
 
 
 
 
 
 
 

Leave a Reply