ಫಸ್ಟ್ ನೈಟ್ ಗೆ ಹೆದರಿ ಆತ್ಮಹತ್ಯೆಗೆ ಶರಣಾದ ಕಿರಣ್

ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಮಾಚರ್ಲ ಸಾಗರ ರಿಂಗ್ ರಸ್ತೆಯ ಸತ್ಯನಾರಾಯಣರಾಜು ಹಾಗೂ ವಿಜಯಲಕ್ಷ್ಮಿ ದಂಪತಿಯ ಪುತ್ರ ಪಟ್ಟಿಕುಡುಪು ಕಿರಣ್ ಕುಮಾರ್ (32) ಹಾಗೂ ಗುಂಟೂರು ಜಿಲ್ಲೆ ತೆನಾಲಿ ವಿಂಚಿಪೇಟೆಯ ಯುವತಿಯೊಂದಿಗೆ ವಿವಾಹವಾಗಿತ್ತು.

ಮದುವೆ ಅದ್ದೂರಿಯಾಗಿ ನೆರವೇರಿತು. ಮದುವೆ ತರುವಾಯ ಮೊದಲ ರಾತ್ರಿಗೆ ಕೋಣೆಯನ್ನು ಸಿಂಗರಿಸಿ ಎಲ್ಲಾ ರೀತಿಯ ತಯಾರಿ ಮಾಡಲಾಗಿತ್ತು.

ಮೊದಲ ರಾತ್ರಿಗೂ ಮುನ್ನ ವರ ಕಿರಣ್ ಕುಮಾರ್ ತನ್ನ ಹೆತ್ತವರನ್ನು ಮಾಚರ್ಲಾದಿಂದ ಗುಂಟೂರಿಗೆ ಬಸ್ ಹತ್ತಿಸಿದ್ದಾನೆ.

ಈಗ ಬರುತ್ತೇನೆ ಎಂದು ತಂದೆ-ತಾಯಿಗೆ ಹೇಳಿ ಹೊರಟವನು ವಾಪಸ್ ಬರಲೇ ಇಲ್ಲ.

ಮೊದಲ ರಾತ್ರಿಗೆ ಬರಬೇಕಾದ ಕಿರಣ್ ಕುಮಾರ್ ಬರಲೆ ಇಲ್ಲ. ಎಷ್ಟು ಹುಡುಕಾಡಿದರೂ ಸಿಗಲಿಲ್ಲ. ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು.

ಕೃಷ್ಣ ನದಿಯಲ್ಲಿ ಕಿರಣ್ ಕುಮಾರ್ ಮೃತ ದೇಹ ಪತ್ತೆಯಾಗಿದೆ. ಅವನ ಮೊಬೈಲ್ ಪೋನ್ ಸಿಮ್ ಕಾರ್ಡ್ ತೆಗೆದು ಮಾಹಿತಿ ಸಂಗ್ರಹಿದಾಗ ಫಸ್ಟ್ ನೈಟ್ ಗೆ ಹೆದರಿ ಕಿರಣ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿರುವುದು ದೃಢವಾಯಿತು.

ಮದುವೆ ಆಗಿ ಮೊದಲ ರಾತ್ರಿಯ ಸಂತಸ ಕಾಣದ ವಧು ಈಗ ಚಿಂತಾಕ್ರಾಂತಳಾಗಿದ್ದಾಳೆ ಕಿರಣ್ ಕುಮಾರ್ ಮೊದಲ ರಾತ್ರಿಗೆ ಏಕೆ ಹೆದರಿದ್ದ, ಅವನನ್ನು ಕಾಡುತ್ತಿದ್ದ ವಿಚಾರಗಳೇನು ಎಂಬುವುದು ಯಕ್ಷ ಪ್ರಶ್ನೆಯಾಗಿದೆ.

 
 
 
 
 
 
 
 
 
 
 

Leave a Reply