ಬಸ್ ಮಾಲೀಕ ಸೈಪುದ್ದೀನ್ ಕೊಲೆ ಯತ್ನ ಪ್ರಕರಣದ ಒಂಬತ್ತು‌ ಜನ ಆರೋಪಿಗಳು ಅಂದರ್ 

ಮಣಿಪಾಲ :​​ ಬಸ್ ಮಾಲೀಕ ಸೈಪುದ್ದೀನ್ ಕೊಲೆ ಯತ್ನ ಪ್ರಕರಣದಲ್ಲಿ ಮಣಿಪಾಲ ಪೊಲೀಸರು ಒಂಬತ್ತು‌ ಜನ ಆರೋಪಿಗಳನ್ನು ಬಂಧಿಸಿದ್ದಾರೆ.​ ಎ.ಕೆ.ಎಮ್.ಎಸ್ ಬಸ್ ಮಾಲೀಕನನ್ನು ಹತ್ಯೆ ಮಾಡಲು​ ​ಅರೋಪಿಗಳು ಕಚೇರಿಗೆ ನುಗ್ಗಿ ಬೆದರಿಕೆ ಹಾಕಿ ನಂತರ ಡಸ್ಟರ್ ಕಾರಿ​ನಲ್ಲಿ ​ ಐದು ಜನ ಪರಾರಿಯಾಗಿರುತ್ತಾರೆ.​ ​
ಸೈಪುದ್ದೀನ್ ದಾಳಿಯಿಂದ ತಪ್ಪಿಸಿ​ ​ಕೊಂಡಿರುತ್ತಾರೆ.​ ಕೊಲೆ ಯತ್ನ ಪ್ರಕರಣದ ಆರೋಪಿಗಳು ಕಾರ್ಕಳದ ರಿಜೆನ್ಸಿ ಲಾಡ್ಜ್ ನಲ್ಲಿ ಅಡಗಿಕೊಂಡಿದ್ದಾರೆ ಎಂಬ ​ಖಚಿತ ​ಮಾಹಿತಿ ಮೆರೆಗೆ​ ಪೊಲೀಸರು ದಾಳಿ ನಡೆಸಿ ​ 9 ಜನ ಆರೋಪಿಗಳನ್ನು​ ​ಬಂಧಿಸಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಐಪಿಎಸ್ ಅವರ ಮಾರ್ಗದರ್ಶನದಲ್ಲಿ ಅಡಿಷನಲ್ ಎಸ್.ಪಿ ಕುಮಾರ ಚಂದ್ರ ಅವರ ನಿರ್ದೇಶನದಂತೆ ಹರಿರಾಮ್ ಶಂಕರ್ ಕುಂದಾಪುರ ಐ.ಪಿ.ಎಸ್,​ ​ಮಣಿಪಾಲ ಇನ್ಸ್ಪೆಕ್ಟರ್ ಮಂಜುನಾಥ್ ಗೌಡ,​ ​ಪಿ.ಎಸ್.ಐ ರಾಜಶೇಖರ್  ಆರೋಪಿಗಳನ್ನು ದಸ್ತಗಿರಿ ​ಮಾಡಿರುತ್ತಾರೆ.​ 
ಈ ಕಾರ್ಯಚರಣೆಯಲ್ಲಿ ಉಡುಪಿ ಡಿ.ವೈ.ಎಸ್.ಪಿ ಜೈ ಶಂಕರ್ ,​ ​ಡಿ.ವೈ.ಎಸ್.ಪಿ ಭರತ್‌ ರೆಡ್ಡಿ,​ ​ಸಿ.ಪಿ.ಐ ಸಂಪತ್ತ್ ಕುಮಾರ್,​ ​ಡಿಸಿಐಬಿ ಇನ್ಸ್ಪೆಕ್ಟರ್ ಮಂಜಪ್ಪ ಮತ್ತು ಸಿಬ್ಬಂದಿಗಳು, ಮಧು ಪಿ.ಎಸ್.ಕಾರ್ಕಳ,​ ​ಹೆಬ್ರಿ ಪಿ.ಎಸ್.ಐ ಸುಮ ಅವರು ಸಹಕರಿಸಿರುತ್ತಾರೆ.​ ​ಬಂಧಿತ ಆರೋಪಿಗಳನ್ನು ಪೊಲೀಸರು ತೀವ್ರ ​ ​​ ವಿಚಾರಣೆ ನಡೆಸುತ್ತಿದ್ದಾರೆ.
 
 
 
 
 
 
 
 
 
 
 

Leave a Reply