ಮಣಿಪಾಲ : ಬಸ್ ಮಾಲೀಕ ಸೈಪುದ್ದೀನ್ ಕೊಲೆ ಯತ್ನ ಪ್ರಕರಣದಲ್ಲಿ ಮಣಿಪಾಲ ಪೊಲೀಸರು ಒಂಬತ್ತು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಎ.ಕೆ.ಎಮ್.ಎಸ್ ಬಸ್ ಮಾಲೀಕನನ್ನು ಹತ್ಯೆ ಮಾಡಲು ಅರೋಪಿಗಳು ಕಚೇರಿಗೆ ನುಗ್ಗಿ ಬೆದರಿಕೆ ಹಾಕಿ ನಂತರ ಡಸ್ಟರ್ ಕಾರಿನಲ್ಲಿ ಐದು ಜನ ಪರಾರಿಯಾಗಿರುತ್ತಾರೆ.
ಸೈಪುದ್ದೀನ್ ದಾಳಿಯಿಂದ ತಪ್ಪಿಸಿ ಕೊಂಡಿರುತ್ತಾರೆ. ಕೊಲೆ ಯತ್ನ ಪ್ರಕರಣದ ಆರೋಪಿಗಳು ಕಾರ್ಕಳದ ರಿಜೆನ್ಸಿ ಲಾಡ್ಜ್ ನಲ್ಲಿ ಅಡಗಿಕೊಂಡಿದ್ದಾರೆ ಎಂಬ ಖಚಿತ ಮಾಹಿತಿ ಮೆರೆಗೆ ಪೊಲೀಸರು ದಾಳಿ ನಡೆಸಿ 9 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಐಪಿಎಸ್ ಅವರ ಮಾರ್ಗದರ್ಶನದಲ್ಲಿ ಅಡಿಷನಲ್ ಎಸ್.ಪಿ ಕುಮಾರ ಚಂದ್ರ ಅವರ ನಿರ್ದೇಶನದಂತೆ ಹರಿರಾಮ್ ಶಂಕರ್ ಕುಂದಾಪುರ ಐ.ಪಿ.ಎಸ್, ಮಣಿಪಾಲ ಇನ್ಸ್ಪೆಕ್ಟರ್ ಮಂಜುನಾಥ್ ಗೌಡ, ಪಿ.ಎಸ್.ಐ ರಾಜಶೇಖರ್ ಆರೋಪಿಗಳನ್ನು ದಸ್ತಗಿರಿ ಮಾಡಿರುತ್ತಾರೆ.
ಈ ಕಾರ್ಯಚರಣೆಯಲ್ಲಿ ಉಡುಪಿ ಡಿ.ವೈ.ಎಸ್.ಪಿ ಜೈ ಶಂಕರ್ , ಡಿ.ವೈ.ಎಸ್.ಪಿ ಭರತ್ ರೆಡ್ಡಿ, ಸಿ.ಪಿ.ಐ ಸಂಪತ್ತ್ ಕುಮಾರ್, ಡಿಸಿಐಬಿ ಇನ್ಸ್ಪೆಕ್ಟರ್ ಮಂಜಪ್ಪ ಮತ್ತು ಸಿಬ್ಬಂದಿಗಳು, ಮಧು ಪಿ.ಎಸ್.ಕಾರ್ಕಳ, ಹೆಬ್ರಿ ಪಿ.ಎಸ್.ಐ ಸುಮ ಅವರು ಸಹಕರಿಸಿರುತ್ತಾರೆ. ಬಂಧಿತ ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.