​​ಪ್ರೇಯಸಿ ಮೇಲೆ ಅನುಮಾನ ಪಟ್ಟು ಆಕೆಯನ್ನು ಕೊಂದು ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಇನ್ನೊಬ್ಬ ಭಗ್ನ ಪ್ರೇಮಿ.

ರಿಪ್ಪನ್‌ಪೇಟೆ: ತಾನು ಪ್ರೀತಿಸಿದ ಯುವತಿ ಇನ್ನೊಬ್ಬನೊಂದಿಗೆ ಪ್ರೇಮ ಸಲ್ಲಾಪದಲ್ಲಿ ತೊಡಗಿ ದ್ದಾಳೆಂದು ಅನುಮಾನಿಸಿ ಪ್ರೇಯಸಿಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ ದುರಂತ ಪ್ರೇಮ್‌ ಕಹಾನಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹೆದ್ದಾರಿಪುರ ಗ್ರಾಮ ಪಂಚಾಯಿತಿ  ವ್ಯಾಪ್ತಿಯ ನೇರಲಿಗೆ ಎಂಬ ಗ್ರಾಮದಲ್ಲಿ ನಡೆದಿದೆ.
ಶಿವಮೊಗ್ಗದ ನಂಜಪ್ಪ ಲೈಫ್‌ ಕೇರ್‌ ನ ನರ್ಸಿಂಗ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಾಗರ ತಾಲೂಕಿನ ಭಾನುಕುಳಿ ಸಮೀಪದ ಉರುಳುಗಲ್ಲು ಗ್ರಾಮದ ಹೆಬ್ಬನಕೆರೆ ವಾಸಿ ಕವಿತಾ (21) ಎಂಬಾಕೆಯನ್ನು ರಿಪ್ಪನ್‌ಹೇಟೆಯಲ್ಲಿ ಪಿಯುಸಿ ಓದುತ್ತಿರುವಾಗ ಪರಿಚಯ ಮಾಡಿಕೊಂಡು ಕಳೆದ ಏಳೆಂಟು ವರ್ಷದಿಂದ ಪ್ರೀತಿಸಿ ನಂತರ ಆಕೆ ಮೋಸ ಮಾಡಿ ಬೇರೊಂದು ಹುಡುಗನನ್ನು ಪ್ರೀತಿ ಮಾಡಿತ್ತಿದ್ದಾಳೆಂಬ ಕಾರಣಕ್ಕೆ ತನ್ನ ಊರಿಗೆ ಕರೆಯಿಸಿಕೊಂಡು ಚೂಡಿದಾರ್‌ ವೇಲ್‌ ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ನಂತರ ತಾನು ವಿಷ ಕುಡಿದು ಆಸ್ಪತ್ರೆ ಸೇರಿದ ಯುವಕ ಚಿಕಿತ್ಸೆ ಫಲಕಾರಿಯಾಗದೆ  ಸಾವನ್ನಪ್ಪಿದ್ದಾನೆ.
ಕವಿತಾಳಿಗೆ ತನ್ನೂರಿನಲ್ಲಿ ಓದಿಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ರಿಷ್ಟನ್‌ಪೇಟೆಯಲ್ಲಿರುವ ತಮ್ಮ ಸಂಬಂಧಿಕರ ಮನೆಲ್ಲಿದ್ದುಕೊಂಡು ಹೈಸ್ಕೂಲ್‌ ಶಿಕ್ಷಣ ಮುಗಿಸಿ ಬಳಿಕ ಅಲ್ಲಿನ ಬಿಸಿಎಂ ಹಾಸ್ಟಲ್‌ ಸೇರಿ ಓದು ಮುಂದುವರೆಸಿದ್ದಳು. ರಿಪ್ಪನ್‌ಪೇಟೆಯ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಓದುವಾಗ ಕವಿತಾಗೆ ಶಿವಮೂರ್ತಿಯ ಪರಿಚಯವಾಗಿತ್ತು. ಪರಿಚಯ ಪ್ರೀತಿಯಾಗಿತ್ತು ಎಂದು ಹೇಳಲಾಗುತ್ತಿದೆ. ನಂತರ ಕವಿತಾ ಶಿವಮೊಗ್ಗದ ನಂಜಪ್ಪ ಲೈಫ್‌ ಕೇರ್‌ ನರ್ಸಿಂಗ್‌ ಕಾಲೇನಲ್ಲಿ ವಿದ್ಯಾಭ್ಯಾಸ ಆರಂಭಿಸಿದ್ದಳು.
ಕವಿತಾಳ ಕುತ್ತಿಗೆಯನ್ನು ಚೂಡಿದಾರದ ವೇಲಿನಿಂದ ಸುತ್ತಿ ಬಿಗಿದು ಸಾಯಿಸಿರುವುದು ಕಂಡು ಬಂದಿದೆ. ತಮ್ಮ ಮಗಳ ಕೊಲೆಯನ್ನು ಮಗಳ ಸ್ನೇಹಿತನಾದ ತಳಲೆ ಗ್ರಾಮದ ಕಗಲಿ ವಾಸಿ ಶಿವಮೂರ್ತಿ ಬಿನ್‌ ಶೇಖರ ಪೂಜಾರಿ ಇವನು ತಮ್ಮ ಮಗಳನ್ನು ಶಿವಮೊಗ್ಗದಿಂದ ಕರೆದುಕೊಂಡು ಬಂದು ಪ್ರೀತಿಸುವಂತೆ ಒತ್ತಾಯಿಸಿದ್ದು ಇದಕ್ಕೆ ಮಗಳು ಕವಿತಾ ತಿರಸ್ಕರಿಸಿರಬಹುದು ಆದ್ದರಿಂದ ಶಿವಮೂರ್ತಿಯೇ ತಮ್ಮ, ಮಗಳನ್ನು ಕೊಲೆ ಮಾಡಿರಬಹುದು, ಈ ಬಗ್ಗೆ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ರಿಷ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮೃತ ಹುಡುಗಿಯ ತಂದೆ ನೀಡಿದ ದೂರಿನಲ್ಲಿ  ಕೋರಿದ್ದಾರೆ.
ಕಳೆದ ಏಳು ವರ್ಷದಿಂದ ಪ್ರೀತಿಸುತ್ತಿದ್ದ ಕವಿತಾ ಕಳೆದೆರಡು ವರ್ಷದಿಂದ ಭದ್ರಾವತಿ ಮೂಲದ ಅ್ಯಂಬುಲೆನ್ಸ್‌ ಡ್ರೈವರ್‌ ಒಬ್ಬನನ್ನು ಪ್ರೀತಿಸುವ ಮೂಲಕ ತನ್ನ ಪ್ರೀತಿಯಿಂದ ದೂರವಾಗುತ್ತಿದ್ದಾಳೆ ಎಂದು ಗಮನಿಸಿದ ಶಿವಮೂರ್ತಿ ಹಲವಾರು ಬಾರಿ ಕವಿತಾಳಿಗೆ ಎಚ್ಚರಿಕೆ ನೀಡಿದರು ಸಹ ಮುಂದುವರಿಸಿ ಕೊಂಡು ಹೋಗಿದ್ದಳು.
ಇದರಿಂದ ಬೇಸತ್ತು ನಿನ್ನ ಬಳಿ ವೈಯುಕ್ತಿಕ ಸಮಾಚಾರಗಳು ಮಾತನಾಡುವುದಿದೆಯಂದು ತನ್ನೂರಿಗೆ ಕರೆಸಿಕೊಂಡು ತನ್ನ ಮನೆಯ ಸಮೀಪದ ಕಾಡಿಗೆ ಕರೆದುಕೊಂಡು ಹೋಗಿ ಕವಿತಾಳು ತೊಟ್ಟುಕೊಂಡಿದ್ದ ಚೂಡಿದಾರದ ವೇಲ್‌ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಘಟನಾ ಸ್ಥಳದಲ್ಲಿ ವಿಷದ ಬಾಟಲಿ ಮತ್ತು ಒಂದು ಪತ್ರವನ್ನು ಸಹ ಬರೆದಿಟ್ಟಿದ್ದಾನೆ. 
ಆರೋಪಿ ಪಾಗಲ್‌ ಪ್ರೇಮಿಯು ಯುವತಿಯನ್ನು ಕೊಲೆ ಮಾಡಿದ ನಂತರ ತಾನೂ ಸಹ ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆತನೂ ಸಾವನ್ನಪ್ಪಿದ್ದಾನೆ. 
 
 
 
 
 
 
 
 
 

Leave a Reply