ಮಣಿಪಾಲ: ದರೋಡೆಗೆ ಸಂಚು ರೂಪಿಸುತ್ತಿದ್ದ ನಾಲ್ವರ ಬಂಧನ!

ದಿನಾಂಕ:13.01.2022 ರಂದು ಖಚಿತ ಮಾಹಿತಿ ಮೇಲೆ ಮಣಿಪಾಲದ ವಿ.ಪಿ ನಗರದ ಅನಂತ ರೆಸಿಡೆನ್ಸಿಯಲ್ಲಿ ಐದು ಜನರು ಅಕ್ರಮ ಗುಂಪುಗೂಡಿ ದರೋಡೆಗೆ ಸಂಚು ರೂಪಿಸಿ ಗಾಂಜಾ ಮತ್ತು ಮಾದಕ ದ್ರವ್ಯವನ್ನು ಮನೆಯಲ್ಲಿಟ್ಟುಕೊಂಡು ಅದನ್ನು ಸೇವಿಸಿ ದರೋಡೆಗೆ ಸಂಚು ರೂಪಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯಂತೆ ಸದರಿ ಸ್ಥಳಕ್ಕೆ ದಾಳಿ ಮಾಡಿ 4 ಜನ ಆರೋಪಿತರುಗಳನ್ನು ದಸ್ತಗಿರಿ ಮಾಡಿದ್ದು, ಒಬ್ಬ ಆರೋಪಿ ಪರಾರಿಯಾಗಿರುತ್ತಾನೆ.

ದಸ್ತಗಿರಿ ಮಾಡಿದ ಆರೋಪಿಗಳ ವಿವರ

1) ಮುಝಾಮಿಲ್ ಪ್ರಾಯ: 27 ವರ್ಷ, ತಂದೆ: ಮೊಯಿದ್ದೀನ್ ವಾಸ: ಕೋಟೆರಸ್ತೆ, ಮಲಾರು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ

2) ಮೊಹಮ್ಮದ್ ಅನಾಸ್ ಸಾಹೇಬ್ ಪ್ರಾಯ: 25ವರ್ಷ, ತಂದೆ: ಮೊಹಮ್ಮದ್ ಅಸ್ಲಾಂ ಸಾಹೇಬ್ ವಾಸ: ಸಂಪಿಗೆ ನಗರ,ಸಾಜಾ ಕಂಪೌಂಡ್, ಉದಾವರ, ಕಾಪುತಾಲೂಕು, ಉಡುಪಿ ಜಿಲ್ಲೆ

3) ಮಹಮ್ಮದ್ ರಫೀಕ್ ಪ್ರಾಯ: 26 ವರ್ಷ, ತಂದೆ: ದಿ: ಹಮೀದ್, ವಾಸ: ಅನಂತ ರೆಸಿಡೆನ್ಸಿ, ಪ್ಲಾಟ್ ನಂ: 201, ವಿ.ಪಿ.ನಗರ, ಶಿವಳಿ ಗ್ರಾಮ, ಉಡುಪಿ ತಾಲೂಕು.

4) ನಿಹಾಲ್ ಪ್ರಾಯ: 18 ವರ್ಷ, ತಂದೆ: ಷರೀಫ್ ಮೊಹಮ್ಮದ್ ವಾಸ: 2/254, ಬಾರೆಕಾಡು, ಬಿ. ಕಸಬಾ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ಆಗಿರುತ್ತದೆ.

ಸದರಿ ಆರೋಪಿತರಿಂದ ದರೋಡೆ ಮಾಡಲು ತಮ್ಮ ಬಳಿ ಇಟ್ಟುಕೊಂಡಿದ್ದ ಮಚ್ಚು -1, ಚೂರಿ -1, ಕಬ್ಬಿಣದ ಸುತ್ತಿಗೆ -1, ಮರದ ಸೋಂಟೆ -1, ಮೊಬೈಲ್ ಫೋನ್- 5, ಹಾಗೂ ಒಟ್ಟು 25,000/- ರೂ ಮೌಲ್ಯದ 6 ಗ್ರಾಂ ಎಂಡಿಎಂಎ ಮಾದಕ ದ್ರವ್ಯ ಮತ್ತು 110 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಯಿತು. ಸದರಿ ಆರೋಪಿತರಿಂದ ಮುಂದೆ ಒದಗುವ ಸಂಭಾವ್ಯ ಘಟನೆಯನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿ ಕಾರ್ಯಾಚರಣೆಯನ್ನು ನಡೆಸಲಾಯಿತು.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಅಕ್ಷಯ್ ಮಚಂದ್ರ ಹಾಕಿ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸಿದ್ಧಲಿಂಗಪ್ಪ ಟಿ ಕೆ.ಎಸ್.ಪಿ.ಎಸ್ ರವರು ತಮ್ಮ ತಂಡದ ಸದಸ್ಯರಾದ ದಿನಕರ ಕೆ.ಪಿ, ಡಿ.ವೈ.ಎಸ್.ಪಿ ಉಡುಪಿ, ದೇವರಾಜ ಟಿ.ವಿ ಪೊಲೀಸ್ ನಿರೀಕ್ಷಕರು ಮಣಿಪಾಲ ಠಾಣೆ, ಅಬ್ದುಲ್ ಖಾದರ್ ಪಿ.ಎಸ್.ಐ ಮಣಿಪಾಲ ಠಾಣೆ, ಡಿ.ವಿ.ಬಿ.ಡಿ.ಸಿ ಕಚೇರಿಯ ಸಿಬ್ಬಂದಿ ವಸಂತ ಕುಮಾರ್ ಮತ್ತು ಮಣಿಪಾಲ ಪಿ.ಹೆಚ್.ಸಿ. ಯ ಸಿಬ್ಬಂದಿ ಪರಶುರಾಮ್ ಅಲ್ಲದೆ ಮಣಿಪಾಲ ಠಾಣೆಯ ಸಿಬ್ಬಂದಿಗಳಾದಎ.ಎಸ್.ಐ ನಾಗೇಶ್ ನಾಯಕ್, ಹೆಚ್.ಸಿ.2168 ಸುಕುಮಾರ್ ಶೆಟ್ಟಿ, ಹೆಚ್.ಸಿ.1094 ಇಮ್ರಾನ್, ಹೆಚ್.ಸಿ.164 ಪ್ರಸನ್ನ ಪಿ.ಸಿ. ಪಿಸಿ 2590 ಸಲ್ಮಾನ್ ಖಾನ್, ಪಿ.ಸಿ.2646 ಅರುಣ್ ಕುಮಾರ್, ಮಹಿಳಾ ಪಿ.ಸಿ.2324 ಶುಭಾ, ಪಿ.ಸಿ.2625 ಚೆನ್ನೈಶ್, ಪಿ.ಸಿ. 40 ಆನಂದಯ, ಚಾಲಕರಾದ ಸುದೀಪ್, ಮಲನಗೌಡ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದಾರೆ.

 
 
 
 
 
 
 
 
 
 
 

Leave a Reply