ಮಸೀದಿಯಿಂದ ಹೊರಬರುತ್ತಿದ್ದ ವೇಳೆ ತಲವಾರಿನಿಂದ ಇರಿತ

ಮಂಗಳೂರು: ವ್ಯಕ್ತಿಯೋರ್ವರು ನಮಾಜ್ ಮುಗಿಸಿ ಮಸೀದಿಯಿಂದ ಹೊರಬರುತ್ತಿದ್ದ ವೇಳೆ ತಲವಾರಿನಿಂದ ಇರಿದ ಘಟನೆ. ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಂದಾವರದಲ್ಲಿ ನಡೆದಿದೆ.

ಹಲ್ಲೆಯಿಂದ ಗಂಭೀರ ಗಾಯಗೊಂಡ ಅಬ್ದುಲ್ ಅಝೀಜ್ (57) ಎಂಬವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.ಅಬ್ದುಲ್ಲ ಅವರು ನಮಾಜ್ ಮುಗಿಸಿ ತನ್ನ ಕಾರಿನ ಬಳಿ ಬರುತ್ತಿದ್ದಂತೆ ಇಬ್ಬರು ಅಪರಿಚಿತರ ಪೈಕಿ ಓರ್ವ ಏಕಾಏಕಿ ಅಬ್ದುಲ್ಲ ಅವರ ಬಳಿ ಬಂದು ತಲವಾರಿನಿಂದ ಇರಿದು ಪರಾರಿಯಾಗಿದ್ದಾನೆ.

ಸದ್ಯ ಮಂಗಳೂರಿನಲ್ಲಿ ಉದ್ಯಮವನ್ನು ಹೊಂದಿರುವ ಅಬ್ದುಲ್ಲ ಅವರು ಈ ಹಿಂದೆ ಬೈಲುಪೇಟೆ ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷರಾಗಿದ್ದರು, ಕಂದಾವರ ಮಸೀದಿಯ ಆಡಳಿತ ಸಮಿತಿಯಲ್ಲೂ ಇದ್ದಾರೆ. ಕರ್ನಾಟಕ ಮುಸ್ಲಿಂ ಜಮಾತ್ ನ ಕಾರ್ಯದರ್ಶಿಯಾಗಿದ್ದು ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದರು.

ಅಬ್ದುಲ್ಲ ಅವರು ಆದಿತ್ಯವಾರ ಗುರುಪುರ ಕೈಕಂಬದಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿ ಮಸೀದಿಗೆ ಬಂದು ನಮಾಜ್ ಮುಗಿಸಿ ತನ್ನ ಕಾರಿನ ಬಳಿ ಬರುತ್ತಿದಂತೆ ದುಷ್ಖರ್ಮಿಗಳು ಧಾಳಿ ನಡೆಸಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಈ ತಲವಾರು ಧಾಳಿಗೆ ಸ್ಪಷ್ಟ ಕಾರಣವೇನು ಎಂದು ತಿಳಿದು ಬಂದಿಲ್ಲವಾದರೂ ವೈಯಕ್ತಿಕ ದ್ವೇಷ ದಾಳಿಗೆ ಕಾರಣವಾಗಿರಬಹುದು ಎಂಬ ಶಂಕೆಯಿದೆ. ಇದೀಗ ಘಟನೆಯ ಸಿಸಿ ಟಿವಿ ದ್ರಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಬಿರುಸಾಗಿ ಹರಿದಾಡುತ್ತಿವೆ. ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

 
 
 
 
 
 
 
 
 
 
 

Leave a Reply