ಡಿಕೆಶಿ ಕುಟುಂಬದವರನ್ನು ಜೈಲಿಗೆ ಕಳುಹಿಸಬೇಕು~ಎಸ್.ಆರ್.ಹಿರೇಮಠ

ಧಾರವಾಡ: ಮೊನ್ನೆಯಷ್ಟೇ ತಮ್ಮ ಮನೆ ಮೇಲೆ ಸಿಬಿಐ ದಾಳಿ ಎದ್ದುರಿಸಿದ್ದ ಡಿಕೆಶಿ ಕುಟುಂಬದವರನ್ನು ಜೈಲಿಗೆ ಕಳುಹಿಸ ಬೇಕೆಂಬ ಮಾತು ಇದೀಗ ಕೇಳಿಬಂದಿದೆ. ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇ ಮಠರವರು ಅಕ್ರಮ ಆಸ್ತಿ ಗಳಿಸಿರುವ ಡಿ.ಕೆ.ಶಿವಕುಮಾರ, ಡಿ.ಕೆ.ಸುರೇಶ ಹಾಗೂ ಅವರ ಕುಟುಂಬದವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್ ಐಆರ್ ದಾಖಲಾಬೇಕು.

ಮತ್ತು ಅವರೆಲ್ಲರನ್ನೂ ಜೈಲಿಗೆ ಕಳಿಸಬೇಕು ಎಂದು ಹೇಳಿಕೆ ನೀಡಿದ್ದಾರೆ. ಮಾಧ್ಯಮದವರೊಂದಿಗೆ ಬುಧವಾರದಂದು ಮಾತನಾಡಿದ ಅವರು, ಪ್ರಸ್ತುತ ಡಿ.ಕೆ.ಶಿ ಮನೆಯ ಮೇಲಿನ ಸಿಬಿಐ ದಾಳಿ ಸ್ವಾಗತಾರ್ಹ. ಡಿಕೆಶಿ ಅಕ್ರಮ ಆಸ್ತಿಗಳು ಬಹಳ ಅಗಧಾವಿದೆ. ವಿ.ಜಿ. ಸಿದ್ಧಾರ್ಥ್ ರ ಕಾಫಿ ಡೇ ಸೇರಿ ಇನ್ನು ಅನೇಕ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನು ಡಿಕೆಶಿ ಕುಟುಂಬದ ಸದಸ್ಯರು ಆದಾಯಕ್ಕಿಂತ ಅಧಿಕ ಆಸ್ತಿ ಗಳಿಸಿದ್ದು, ಸಿಬಿಐ ದಾಳಿಯಿಂದ ಅದು ತಿಳಿದು ಬಂದಿದೆ. ಹಾಗೆ ಡಿಕೆಶಿ ಅವರ ಅಕ್ರಮ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು, ಮತ್ತು ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈ ಗೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದು ಒತ್ತಾಯಿ ಸಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

 
 
 
 
 
 
 
 
 

Leave a Reply