ಶ್ರೀನಗರ: ಗುರುವಾರದಂದು ಜಮ್ಮು ಮತ್ತು ಕಾಶ್ಮೀರದ ಕಾಜಿಗುಂಡ ಏರಿಯಾದಲ್ಲಿ ಸ್ಥಳೀಯ ಬಿಜೆಪಿ ನಾಯಕರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆ ಗುರುವಾರ ರಾತ್ರಿ 8.30ರ ಸುಮಾರಿಗೆ ಕಾಜಿಗುಂಡದ ವೈಕೆ ಪೋರಾದಲ್ಲಿ ಈದ್ಗಾದಲ್ಲಿ ನಡೆದಿದೆ. ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಫಿದಾ ಹುಸೇನ್ ಯಾಟೂ, ಉಮರ್ ರಂಜಾನ್ ಹಜ್ಜಾನ್ ಮತ್ತು ಉಮರ್ ರಶೀದ್ ಎಂಬುವರು ಮೃತಪಟ್ಟವರು. ಕುಲ್ಗಾಮ್ ಜಿಲ್ಲೆಯ ಪೊಲೀಸರು ಈ ಮಾಹಿತಿ ನೀಡಿದ್ದಾರೆ. ಇನ್ನು ಪ್ರತ್ಯಕ್ಷವಾಗಿ ಇದನ್ನು ನೋಡಿದ ಸ್ಥಳೀಯರು ದಾಳಿಕೋರರು ಆಲ್ಟೋ ಕಾರಿ ನಲ್ಲಿ ಪರಾರಿಯಾದರೆಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತ ಪಟ್ಟ ಈರ್ವರು ಬಿಜೆಪಿಗೆ ಸೇರಿದ್ದು, ಫಿದಾ ಹುಸೇನ್ ಯಾಟೂ ಬಿಜೆಪಿ ಯುವಾ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದರು.
ಉಳಿದಂತೆ ವೈಕೆ ಪೋರಾ ನಿವಾಸಿಗಳಾದ ಉಮರ್ ರಂಜಾನ್ ಹಜ್ಜನ್ ಮತ್ತು ಉಮರ್ ರಶೀದ್ ಬೇಗ್ ಸ್ಥಳೀಯ ಬಿಜೆಪಿ ನಾಯಕ ರಾಗಿದ್ದರು. ಈ ದಾಳಿ ಕುರಿತಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿ ಸಿದ್ದಾರೆ. ಹಾಗೆ ಭಾರತೀಯ ಸೇನೆ ದಾಳಿ ನಡೆದ ಪ್ರದೇಶವನ್ನು ಸುತ್ತುವರಿದಿದ್ದು, ಉಗ್ರರರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಈ ಘಟನೆಗೆ ಪ್ರಧಾನಿ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದು, ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ನಮ್ಮ ಯುವ ಕಾರ್ಯಕರ್ತರ ಹತ್ಯೆ ಯನ್ನು ನಾನು ಖಂಡಿಸುತ್ತೇನೆ.
ಯುವಕರು ಜಮ್ಮು ಮತ್ತು ಕಾಶ್ಮೀರದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದರು. ಇಂತಹ ದುಃಖದ ಸಮಯದಲ್ಲಿ ಮೃತರ ಕುಟುಂಬದ ಜತೆ ನಾನಿದ್ದೇನೆ ಎಂದಿದ್ದಾರೆ.