ಬಿಜೆಪಿ ಕಾರ್ಯಕರ್ತರ ಮೇಲೆ ಗುಂಡಿನ ದಾಳಿ

ಶ್ರೀನಗರ: ಗುರುವಾರದಂದು ಜಮ್ಮು ಮತ್ತು ಕಾಶ್ಮೀರದ ಕಾಜಿಗುಂಡ ಏರಿಯಾದಲ್ಲಿ ಸ್ಥಳೀಯ ಬಿಜೆಪಿ ನಾಯಕರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆ ​ಗುರುವಾರ ​ರಾತ್ರಿ 8.30ರ ಸುಮಾರಿಗೆ​ ಕಾಜಿಗುಂಡದ ವೈಕೆ ಪೋರಾದಲ್ಲಿ  ಈದ್ಗಾದಲ್ಲಿ​​ ನಡೆದಿದೆ.​ ​ಆಸ್ಪತ್ರೆಗೆ ​ಸಾಗಿಸುವಾಗ  ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

 
ಫಿದಾ ಹುಸೇನ್​​ ಯಾಟೂ, ಉಮರ್​ ರಂಜಾನ್​ ಹಜ್ಜಾನ್​ ಮತ್ತು ಉಮರ್​ ರಶೀದ್​ ಎಂಬುವರು ಮೃತಪಟ್ಟವರು. ಕುಲ್ಗಾಮ್​ ಜಿಲ್ಲೆಯ ಪೊಲೀಸರು ಈ ಮಾಹಿತಿ ನೀಡಿದ್ದಾರೆ. ಇನ್ನು ಪ್ರತ್ಯಕ್ಷವಾಗಿ ಇದನ್ನು ನೋಡಿದ ಸ್ಥಳೀಯರು ದಾಳಿಕೋರರು ಆಲ್ಟೋ ಕಾರಿ ನಲ್ಲಿ ಪರಾರಿಯಾದರೆಂದು  ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.​ ಮೃತ ಪಟ್ಟ ಈರ್ವರು ಬಿಜೆಪಿಗೆ ಸೇರಿದ್ದು,​ ಫಿದಾ ಹುಸೇನ್​ ಯಾಟೂ ಬಿಜೆಪಿ ಯುವಾ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದರು.
ಉಳಿದಂತೆ ವೈಕೆ ಪೋರಾ ನಿವಾಸಿಗಳಾದ ಉಮರ್​ ರಂಜಾನ್​ ಹಜ್ಜನ್​​ ಮತ್ತು ಉಮರ್​ ರಶೀದ್​ ಬೇಗ್​ ಸ್ಥಳೀಯ ಬಿಜೆಪಿ ನಾಯಕ ರಾಗಿದ್ದರು. ಈ ದಾಳಿ ಕುರಿತಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರಕ​​ರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿ ಸಿದ್ದಾರೆ. ಹಾಗೆ  ಭಾರತೀಯ ಸೇನೆ ದಾಳಿ ನಡೆದ ಪ್ರದೇಶವನ್ನು ಸುತ್ತುವರಿದಿದ್ದು, ಉಗ್ರರರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ.​ ಈ ಘಟನೆ​ಗೆ ಪ್ರಧಾನಿ ಮೋದಿ​ ಆಕ್ರೋಶ ವ್ಯಕ್ತಪಡಿಸಿದ್ದು, ಟ್ವೀಟ್​ ಮೂಲಕ ಸಂತಾಪ ಸೂಚಿಸಿದ್ದಾರೆ. ನಮ್ಮ ಯುವ ಕಾರ್ಯಕರ್ತರ ಹತ್ಯೆ ಯನ್ನು ನಾನು ಖಂಡಿಸುತ್ತೇನೆ.

ಯುವಕರು ಜಮ್ಮು ಮತ್ತು ಕಾಶ್ಮೀರದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದರು. ಇಂತಹ ದುಃಖದ ಸಮಯದಲ್ಲಿ ಮೃತರ ಕುಟುಂಬದ ಜತೆ ನಾನಿದ್ದೇನೆ ಎಂದಿದ್ದಾರೆ.
 
 
 
 
 
 
 
 
 
 
 

Leave a Reply