ಉಡುಪಿ: ನಲ್ವತ್ತು ಪರ್ಸೆಂಟ್ ಕಮಿಷನ್ ಅರೋಪಿಸಿ , ಉಡುಪಿಯ ಲಾಡ್ಜ್ ಒಂದರಲ್ಲಿ ಅತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೇಲ್ ಕುಟುಂಬಸ್ಥರು ಉಡುಪಿ ನಗರ ಠಾಣೆಯಲ್ಲಿ ಈಶ್ವರಪ್ಪ ವಿರುದ್ದ ದೂರನ್ನು ದಾಖಲಿಸಿದ್ದಾರೆ.
ನಿನ್ನೆ ತಡರಾತ್ರಿ ಅಗಮಿಸಿದ ಸಂತೋಷ್ ಕುಟುಂಬಸ್ಥರು ಸಹೋದರನ ಮೃತ ದೇಹ ಕಂಡಾಕ್ಷಣ ಅಕ್ರೋಶಗೊಂಡ ಪ್ರಶಾಂತ್ ಪಾಟೇಲ್ ತನ್ನಸಹೋದರ ಸಾವಿಗೆ ಈಶ್ವರಪ್ಪ ಕಾರಣ, ಅತ ಬರೆದಿರುವ ಡೆತ್ ನೋಟ್ ನಂತೆ ಅವರ ಮೇಲೆ ಶಿಕ್ಷೆ ಅಗಬೇಕು.
ಅಲ್ಲಿಯವರೆಗೆ ಮರಣೊತ್ತರ ಪರೀಕ್ಷೆ ಮಾಡಲು ಬಿಡೋದಿಲ್ಲ ಎಂದು ಹೇಳಿದ್ದಾರೆ.
ಉಡುಪಿ ನಗರ ಠಾಣೆಯಲ್ಲಿ ಈಶ್ವರಪ್ಪ ಸೇರಿದಂತೆ ಅವರ ಅತ್ಮೀಯರ ಮೇಲೂ ದೂರನ್ನು ದಾಖಲಿಸಲಾಗಿದೆ.