ಪೊಲೀಸ್ ಇಲಾಖೆ ಸೇರಲು ಪೋಲಿಸ್ ಠಾಣೆ ಸೇರಿದ ನಕಲಿ ಅಭ್ಯರ್ಥಿಗಳು

 ಬೆಂಗಳೂರು : ಕೆ.ಎಸ್.ಆರ್.ಪಿ ನೇಮಕಾತಿ ದೈಹಿಕ ಪರೀಕ್ಷೆ ಗೆ ಮಧ್ಯವರ್ತಿಗಳ ಮೂಲಕ ನಕಲಿ ಅಭ್ಯರ್ಥಿಗಳು ಹಾಜರಾಗಿದ್ದು, ನಿಜವಾದ ಪೊಲೀಸರು ಆರು ಜನ ನಕಲಿ ಪೊಲೀಸರನ್ನು ಬಂಧಿಸಿದ್ದಾರೆ. ವೈದ್ಯಕೀಯ ,ಅಂಕಪಟ್ಟಿ ದಾಖಲೆ ಪರಿಶೀಲನೆ ವೇಳೆ ಮೂವರು ಆರೋಪಿಗಳು ಸಿಕ್ಕಿಬಿದಿದ್ದಾರೆ.ಮಡಿವಾಳದ ಪರಪ್ಪನ ಅಗ್ರಹಾರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಜನವರಿಯಲ್ಲಿ ನಡೆದಿದ್ದ KSRP ನೇಮಕಾತಿ ದೈಹಿಕ ಪರೀಕ್ಷೆ ಗೆ 5 ಲಕ್ಷಕ್ಕೆ ಡೀಲ್ ಆಗಿದ್ದು, ಮೆಡಿಕಲ್ ಮತ್ತು ಅಂಕಪಟ್ಟಿ ದಾಖಲೆಗಳ ಪರಿಶೀಲನೆ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ. 

ದೈಹಿಕ ಪರೀಕ್ಷೆ ವೇಳೆ ಅಭ್ಯರ್ಥಿಗಳ ವಿಡಿಯೋ ಗ್ರಾಫಿ ಇಲಾಖೆ ಮಾಡಿತ್ತು.ಜಗದೀಶ್ ದೊಡ್ಡಗೌಡರ್ ಪರವಾಗಿ ದೈಹಿಕ ಪರೀಕ್ಷೆಗೆ ಹಾಜರಾಗಿದ್ದ ಪ್ರಕಾಶ್ ಆಡಿನ್, ಮಲ್ಲಯ್ಯ ಪೂಜಾರಿ ಪರವಾಗಿ ಸೈಯಾದ್ ಚಿಮ್ಮಡ್ ದೈಹಿಕ ಪರೀಕ್ಷೆಗೆ ಹಾಜರು, ನಾಗಪ್ಪ ಪರವಾಗಿ ದೈಹಿಕ ಪರೀಕ್ಷೆಗೆ ಹಾಜರಾಗಿದ್ದ ಮಲ್ಲಿಕಾರ್ಜುನ ಎಂದು ತಿಳಿದು ಬಂದಿದೆ. ಈ ಆಧಾರದ ಮೇಲೆ ಅಧಿಕಾರಿಗಳಿಂದ ಪರಪ್ಪನ ಅಗ್ರಹಾರ, ಮಡಿವಾಳ ಪೊಲೀಸ್ ಠಾಣೆಯಲ್ಲಿ ಆರು ಮಂದಿಯ ಬಂಧನವಾಗಿದೆ.

 
 
 
 
 
 
 
 
 
 
 

Leave a Reply