ವೈದ್ಯರುಗಳಿಗೆ ಮಾನಸಿಕ ಕಿರುಕುಳ ~ಸಚಿವರಿಗೆ ಮನವಿ

ಇತ್ತೀಚೆಗೆ ಆಯುಷ್ ವೈದ್ಯರುಗಳಿಗೆ ಕೆಲವು ಪಟ್ಟಬದ್ಧ ಹಿತಾಸಕ್ತಿಗಳಿಂದ ಆಗುತ್ತಿರುವ ತೊಂದರೆಗಳನ್ನು ನಿವಾರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ , ಸಮಾಜ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮನವಿ ಸಲ್ಲಿಸಲಾಯಿತು.

ಇತ್ತೀಚಿನ ದಿನಗಳಲ್ಲಿ ಕೆಲವು ಅಹಿತಕರ ಘಟನೆಗಳು ನಡೆಯುತ್ತಿದ್ದು , ಆಯುಷ್ ವೈದ್ಯರುಗಳ ಕ್ಲಿನಿಕ್ ಒಳಗಡೆ ವೀಡಿಯೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ವೈದ್ಯರ ತೇಜೋವಧೆ ನಡೆಸಲಾಗುತ್ತಿದೆ.

ಅಲ್ಲದೆ ಸುಳ್ಳು ಮಾಹಿತಿಗಳನ್ನು ವಾಟ್ಸಪ್ , ಫೇಸ್ಬುಕ್ ಗಳ ಮೂಲಕ ಹರಿಯಬಿಟ್ಟು ವೈದ್ಯರಿಗೆ ಮಾನಸಿಕ ಹಿಂಸೆಯನ್ನು ನೀಡುತ್ತಿದ್ದು,
ಅಂಥವರ ಬಗ್ಗೆ ಸೂಕ್ತಕ್ರಮ ಜರುಗಿಸುವಂತೆ ಮನವಿಯಲ್ಲಿ ವಿನಂತಿಸಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಮನವಿಯನ್ನು ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು ,ಪೊಲೀಸ್ ಅಧೀಕ್ಷಕರುಗಳಿಗೂ ನೀಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಆಯುಷ್ ಫೆಡರೇಶನ್ ಉಡುಪಿ ಜಿಲ್ಲಾ ಅಧ್ಯಕ್ಷರಾದ ಡಾ. ಎನ್.ಟಿ ಅಂಚನ್, ಜಿಲ್ಲಾಕಾರ್ಯದರ್ಶಿ ಡಾ. ಸತೀಶ್ ರಾವ್ ಕುಂದಾಪುರ, ತಾಲೂಕು ಅಧ್ಯಕ್ಷ ಡಾ ರವೀಂದ್ರ ಕುಂದಾಪುರ, ಕಾರ್ಯದರ್ಶಿ ಡಾ. ರಾಜೇಶ್ ಶೆಟ್ಟಿ ಹಾಗೂ ಭಾಗಗಳಿಂದ ಬಂದ ಸುಮಾರು 70ಕ್ಕೂ ಹೆಚ್ಚಿನ ವೈದ್ಯರ ತಂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply