ಗೋರಕ್ಷಕರ ಮೇಲೆ ವಾಹನ ಹತ್ತಿಸಿ ಕೊಲೆಗೆ ಯತ್ನಿಸಿದ ಆರೋಪಿಗಳ ಅಂದರ್ 

ಪ್ರಕರಣ ನಡೆದ ಕೆಲವೇ ಗಂಟೆಗಳಲ್ಲಿ ಇಬ್ಬರು ಆರೋಪಿಗಳಾದ ನವೀದ್ ಮತ್ತು ಶ್ರೀಧರಗೌಡ ಎಂಬುವರನ್ನು ಬಂಧಿಸಲಾಗಿತ್ತು. ಪೊಲೀಸರ ಸತತ ಕಾರ್ಯಾಚರಣೆಯಿಂದ ಪ್ರಮುಖ ಆರೋಪಿಗಳಾಗಿದ್ದ ಶಿವಮೊಗ್ಗ ಟಿಪ್ಪುನಗರದ ಕಸಾಯಿ ಖಾನೆಯನ್ನು ಅಕ್ರಮವಾಗಿ ನಡೆಸುತ್ತಿದ್ದ ಅಫ್ರೋಜ್ ಮತ್ತು ಅನ್ವರ್ ಎಂಬುವವರನ್ನು ಕೂಡ ಬಂಧಿಸಲಾಗಿದೆ.  

ಶಿವಮೊಗ್ಗ ಜಿಲ್ಲಾ ರಕ್ಷಣಾ ಅಧಿಕಾರಿಗಳಾದ ಬಿ.ಎಂ ಲಕ್ಷ್ಮಿ ಪ್ರಸಾದ್‌ರವರ ಮಾರ್ಗದರ್ಶನದಂತೆ ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರ ಮತ್ತು ಸರ್ಕಲ್ ಇನ್ಸ್‌ಪೆಕ್ಟರ್ ಪ್ರವೀಣ್ ನೀಲಮ್ಮನವರು ಹಾಗೂ ಸಬ್ ಇನ್ಸ್‌ಪೆಕ್ಟರ್ ಜಯಪ್ಪನಾಯ್ಕರವರು ವಿಶೇಷ ಕಾಳಜಿಯನ್ನು ವಹಿಸಿ ಆರೋಪಿಗಳ ಪತ್ತೆ ಕಾರ್ಯಕ್ಕೆ ಮುಂದಾಗಿದ್ದರು.

ಘಟನೆ ನಡೆದ ರಾತ್ರಿಯೇ ಶಿವಮೊಗ್ಗದಲ್ಲಿರುವ ಟಿಪ್ಪುನಗರದಲ್ಲಿ ಆರೋಪಿಗಳ ಮನೆಗೆ ದಾಳಿ ನಡೆಸಿದಾಗ ಆರೋಪಿಗಳು ನಾಪತ್ತೆಯಾಗಿದ್ದರು. ಅಂದು ಸುಮಾರು 18 ಆರೋಪಿಗಳನ್ನು ಪತ್ತೆಹಚ್ಚಿ ತುಂಗಾನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು.

ಈ ಇಬ್ಬರು ಆರೋಪಿಗಳ ಪತ್ತೆ ಕಾರ್ಯದಲ್ಲಿ ಮತ್ತು ಈ ಪ್ರಕರಣದ ಸಂಪೂರ್ಣ ತನಿಖೆ ಮತ್ತು ಆರೋಪಿಗಳ ವಶಪಡಿಸಿಕೊಳ್ಳುವಲ್ಲಿ ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರ,  ಸರ್ಕಲ್ ಇನ್ಸ್‌ಪೆಕ್ಟರ್ ಪ್ರವೀಣ್ ನೀಲಮ್ಮನವರು , ಮಾಳೂರು ಸಬ್ ಇನ್ಸ್‌ಪೆಕ್ಟರ್ ಜಯಪ್ಪನಾಯ್ಕ,  ಎಎಸ್ಐ ರುದ್ರೇಶ್, ಎಎಸ್ಐ ಮಂಜಪ್ಪ, ಮುಖ್ಯ ಪೊಲೀಸ್ ಕಾನ್ ಸ್ಟೆಬಲ್ ರಮೇಶ್ ನಾಯಕ್,  ಪೊಲೀಸ್ ಸಿಬ್ಬಂದಿಗಳಾದ ರಾಮಪ್ಪ,  ಪುನೀತ್,  ಸುರಕ್ಷಿತ,  ಮಹೇಶ್, ಸುಬ್ಬಣ್ಣ, ಭರತ್, ಚೇತನ್, ಅಭಿಲಾಷ್, ವಿವೇಕ್ ಮುಂತಾದವರು ಭಾಗವಹಿಸಿ ಜನಮೆಚ್ಚುಗೆ ಗಳಿಸಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿಗಳ ಮೇಲೆ ಕೊಲೆ ಯತ್ನ ಐಪಿಸಿ 307 ಕಲಂನಂತೆ ಮತ್ತು ಕೇಂದ್ರ ಸರ್ಕಾರದ ಹೊಸ ಕಾಯಿದೆ ಗೋವುಗಳ ಕಳ್ಳಸಾಗಾಣಿಕೆ ಗಂಭೀರ ಪ್ರಕರಣಗಳನ್ನು ದಾಖಲಿಸಲಾಗಿದೆ

 
 
 
 
 
 
 
 
 
 
 

Leave a Reply