ಈ ದಿನ ಕುಂದಾಪುರ ವಿಭಾಗ, ಶಂಕರನಾರಾಯಣ ವಲಯ, ಮೊಳಹಳ್ಳಿ ಘಟಕದ ಶಿರಿಯಾರ ಗಸ್ತು ವ್ಯಾಪ್ತಿಯ ಶಿರಿಯಾರ ಮೀಸಲು ಅರಣ್ಯ & ಸರಕಾರಿ ಪ್ರದೇಶದಲ್ಲಿ ವನ್ಯಜೀವಿ ಬೇಟೆಗಾಗಿ ಇರಿಸಿದ್ದ ನಾಡ ಗುಂಡುಗಳನ್ನು ಸಂಗ್ರಹಿಸುವ ಸಮಯ ಇಬ್ಬರು ಆರೋಪಿಗಳನ್ನು (ಆರೋಪಿ ಕೆ. ಎಸ್. ಶೇಷಾದ್ರಿ ಯಾನೆ ಸುರೇಂದ್ರ, ಬೆಳಗೋಡು, ಕೆದೂರು ಗ್ರಾಮ & ಅಂಚೆ, / ಸುಧಾಕರ, ಕೊರ್ಗಿ ಗ್ರಾಮ, ಹೆಸ್ಕತ್ತೂರು ಅಂಚೆ, ಕುಂದಾಪುರ ತಾಲೂಕು) ದಸ್ತಗಿರಿ ಮಾಡಿ ಕೃತ್ಯಕ್ಕೆ ಬಳಸಿದ 1-ಬೈಕ್, 2-ಮೊಬೈಲ್ 7-ನಾಡಗುಂಡು/ ಸಿಡಿಮದ್ದುಗಳನ್ನು ಸರಕಾರದ ಪರ ಅಮಾನತ್ತು ಪಡಿಸಿಕೊಂಡು ಅರಣ್ಯ ತಕ್ಷೀರು ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.