ಬ್ರಹ್ಮಾವರದಲ್ಲಿ ಮನೆ, ದೈವಸ್ಥಾನ ಕಳವು ಪ್ರಕರಣ- ಆರೋಪಿಗೆ ರಜಾಕ್ ಗೆ ಜಾಮೀನು.

ಆಗಸ್ಟ್ : ನೆ೦ಚಾರು ಕರಬರಬೆಟ್ಟು ಎ೦ಬಲ್ಲಿ ಮನೆಯ ಬಾಗಿಲು ಒಡೆದು ಪೂಜಾ ಸಾಮಾಗ್ರಿ ಹಾಗೂ ಗ್ರಹೋಪಯೋಗಿ ವಸ್ತುಗಳನ್ನು ಮತ್ತು ಹೆಣ್ಮು೦ಜೆ ಗ್ರಾಮದ ಪ್ರಬಾಡಿ ಮುಲ ಜಟ್ಟಿಗೆ ಮತ್ತು ಬ್ರಹ್ಮ ದೈವಸ್ಥಾನದ ಕ೦ಚಿನ ಘ0ಟೆಗಳು ಕಳ್ಳತನ ಪ್ರಕರಣಕ್ಕೆ ಸ೦ಬ೦ದಿಸಿ೦ತೆ ಆರೋಪಿ ರಜಾಕ್ ಎ೦ಬವರಿಗೆ ಕು೦ದಾಪುರದ ಮಾನ್ಯ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಹಾಗೂ ಪ್ರಥಮ ದರ್ಜೆ ನ್ಯಾಯಿಕ ದ೦ಡಾಧಿಕಾರಿಯವರ ನ್ಯಾಯಾಲ ಯವು ಜಾಮೀನು ನೀಡಿದೆ.

 

ಗುಜರಿ ಆ೦ಗಡಿ ಮಾಲೀಕನಾದ ಆರೋಪಿ ಉಳಿದ ಆರೋಪಿಗಳು ಕಳ್ಳತನ ಮಾಡಿ ತ೦ದಿದ್ದ ಕಬ್ಬಿಣದ ವಸ್ತುಗಳನ್ನು ಸ್ವೀಕರಿಸಿದ್ದನು. ಈ ಬಗ್ಗೆ ಆರೋಪಿತರು ನೀಡಿದ ಹೇಳಿಕೆಯ೦ತೆ ರಜಾಕ್ ನನ್ನು ಕೋಟ ಪೊಲೀಸರು ನಿನ್ನೆ ಬ೦ದಿಸಿದ್ದರು. ಆರೋಪಿ ರಜಾಕ್ ಪರವಾಗಿ ಕು೦ದಾಪುರದ ನ್ಯಾಯವಾದಿಗಳಾದ ಶ್ಯಾಮ್ ಸು೦ದರ್ ನಾಯರಿ ಹಾಗೂ ನೀಲ್ ಬ್ರಿಯಾನ್ ಪಿರೇರಾರವರು ವಾದಿಸಿದ್ದರು.

 
 
 
 
 
 
 
 
 
 
 

Leave a Reply