ಮಂಗಳೂರು: ಅಪ್ಪ ಮಗನ ನಡುವೆ ನಡೆದ ಜಗಳದಲ್ಲಿ ಮಗನಿಗೆ ಬೆಂಕಿ ಹಚ್ಚಿದ ತಂದೆ

ಮಂಗಳೂರು : ತಂದೆ ಮಗನ ನಡುವೆ ಕ್ಷುಲಕ ವಿಷಯಕ್ಕೆ ಶುರುವಾದ ಜಗಳ ವಿಕೋಪಕ್ಕೆ ತಿರುಗಿ ತಂದೆಯೇ ತನ್ನ ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಜಪ್ಪಿನಮೊಗರು ಗ್ರಾಮದ ಕೊಪ್ಪರಿಗೆ ಗುತ್ತು ಎಂಬಲ್ಲಿ ನಡೆದಿದೆ.

ಬೆಂಕಿ ಹಚ್ಚಿದ ಆರೋಪಿಯನ್ನು ವಿಶ್ವನಾಥ ಶೆಟ್ಟಿ ಹಾಗೂ ಮಗನನ್ನು ಸ್ವಾಮೀತ್ ಶೆಟ್ಟಿ (25) ಎಂದು ಗುರುತಿಸಲಾಗಿದೆ. ಹಸು ಕಟ್ಟುವ ವಿಚಾರದಲ್ಲಿ ತಂದೆ ಮಗನ ನಡುವೆ ಜಗಳ ನಡೆದಿತ್ತು ಮಗನ ಮೇಲೆ ಕೋಪಿತನಾದ ವಿಶ್ವನಾಥ ಶೆಟ್ಟಿ ಮಗನನ್ನು ಮನೆಯ ಒಳಗೆ ಹಾಕಿ ಬೆಂಕಿ ಹಚ್ಚಿದ್ದಾರೆ.ಬೆಂಕಿ ಹಚ್ಚಿರುವುದರಿಂದ ಸ್ವಾಮೀತ್ ಶೆಟ್ಟಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು,ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಪಿ ವಿಶ್ವನಾಥ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 
 
 
 
 
 
 
 
 
 
 

Leave a Reply