ಬೆಳಗಾವಿಯಲ್ಲಿ ಎಸಿಬಿ ದಾಳಿ ~ ಎಸ್ಐ ಹಿತ್ತಲಮನಿ ಕತ್ತಲಮನಿ ಕಡೆ

ಬೆಳಗಾವಿಯಲ್ಲಿ ಎಸಿಬಿ ರೇಡ್ಪಿ: ಎಸ್ಐ ಹಿತ್ತಲಮನಿ ಕತ್ತಲಮನಿ ಕಡೆ

ಬೆಳಗಾವಿ: ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಒಬ್ಬ ಪಿಎಸ್ಐ ಹಾಗೂ ಇಬ್ಬರು ಸಿಬ್ಬಂದಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿರುವ ಘಟನೆ‌ ಜಿಲ್ಲೆಯ ಚಿಕ್ಕೋಡಿಯ ಸದಲಗಾದಲ್ಲಿ ನಡೆದಿದೆ.

ಸದಲಗಾ ಪಿಎಸ್ಐ ಕುಮಾರ್ ಹಿತ್ತಲಮನಿ ಹಾಗೂ ಸಿಬ್ಬಂದಿಗಳಾದ ಶ್ರೀಶೈಲ್ ಗಡ್ಡಿ, ಬಂಗಿ ಎಸಿಬಿ ಬಲೆಗೆ ಬಿದ್ದವರಾಗಿದ್ದಾರೆ. ರಾಜು ಪಚ್ಚಾಪುರೆ ಎಂಬ ಪಾನ್ ಅಂಗಡಿ ಮಾಲೀಕನ ಬಳಿ ನಿನ್ನದು ಅನಧಿಕೃತ ಅಂಗಡಿ.

ಸುಮ್ಮನಿರಲು 50 ಸಾವಿರ ರೂಪಾಯಿ ಹಣ ನೀಡಬೇಕೆಂದು ಲಂಚದ ಬೇಡಿಕೆ ಇಡಲಾಗಿತ್ತು ಎನ್ನುವ ದೂರಿನ ಅನ್ವಯ ದಾಳಿ ನಡೆದಿದೆ.

ಈ ಪೈಕಿ 40 ಸಾವಿರ ರೂಪಾಯಿ ಹಣ ನೀಡುವಾಗ ಬೆಳಗಾವಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ. ಎಸಿಬಿ ಎಸ್ಪಿ ಬಿ ಎಸ್ ನೇಮಗೌಡ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

 
 
 
 
 
 
 
 
 
 
 

Leave a Reply