ಕುಂದಾಪುರ – ಭಿಕ್ಷಾಟನೆ ನಿರತ 11 ಮಕ್ಕಳ ರಕ್ಷಣೆ

ಉಡುಪಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ​ ಘಟಕ, ಪುರಸಭೆ ಕುಂದಾಪುರ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಮಕ್ಕಳ​ ಸಹಾಯವಾಣ,​ ​ವಿಶ್ವಾಸದಮನೆ ಸಂಸ್ಧೆ ಜಂಟಿ ಕಾರ್ಯಾ ಚರಣೆ ನಡೆಸಿ ಕುಂದಾಪುರದ ಸಂತೆ ಮಾರ್ಕೆಟ್, ಬಸ್​ ನಿಲ್ದಾಣಗಳಲ್ಲಿ ಭಿಕ್ಷಾಟನೆ ನಿರತ ಶಿರಸಿ ಮತ್ತು ಹಾವೇರಿ ಮೂಲದ 9 ಹೆಣ್ಣು 2 ಗಂಡು ಒಟ್ಟು 11 ಮಕ್ಕಳನ್ನು ರಕ್ಷಿಸಿ​ ಪುನರ್ವಸತಿ ಕಲ್ಪಿಸುವ ಸಲುವಾಗಿ ನಿಟ್ಟೂರು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದರು.

ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ ನಾಯಕ್, ಕಾನೂನು ಪರಿವೀಕ್ಷಣಾಧಿಕಾರಿ​​ ಪ್ರಭಾಕರ ಆಚಾರ್, ಕುಂದಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ, ಸಹಾಯಕ ಶಿಶು ಅಭಿವೃದ್ಧಿ​ ಯೋಜನಾಧಿಕಾರಿ ಶೋಭಾ, ಪರಿಸರ ಅಭಿಯಂತರ ರಾಘವೇಂದ್ರ, ಪುರಸಭೆ ಅಧಿಕಾರಿಗಳಾದ ಶರತ್, ರಾಘವೇಂದ್ರ​​ ನಾಯ್ಕ್, ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಅರುಣ್ ಕುಮಾರ್ .ಬಿ .ಎನ್, ದೇವಾ ಕುಮಾರಿ, ಸುನಿತಾ ಬಾನು, ಶಂಕರ್​ ಶೆಟ್ಟಿ​. 
 
ಕುಂದಾಪುರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸದಾಶಿವ ಗವರೋಜಿ, ಸಿಬ್ಬಂದಿಗಳಾದ ಪ್ರಸನ್ನ, ಬೇಬಿ, ಸಮಾಜ​ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಹೇಶ್ ದೇವಾಡಿಗ, ಯೋಗೀಶ್,​ ಸುರಕ್ಷಾ, ಸುನಂದಾ, ಸಂದೇಶ, ಅಂಬಿಕಾ, ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕಿ ಪೂರ್ಣಿಮಾ ಬಾನು, ಮಕ್ಕಳ​ ಸಹಾಯವಾಣಿಯ ವೃಷಕ್, ಪ್ರಮೋದ್, ವಿಶ್ವಾಸದಮನೆ ಸಂಸ್ಥೆಯ ಕ್ರಿಸ್ಟೋಪರ್ ಭಾಗವಹಿಸಿದ್ದರು.
 
 
 
 
 
 
 
 
 
 
 

Leave a Reply