ಮಂಗಳೂರಿನಲ್ಲಿ ಮಾದಕ ಜಾಲದ ಇಬ್ಬರ ಬಂಧನ

ಮಂಗಳೂರು: ಮಂಗಳೂರು ನಗರ ಪೊಲೀಸರು ಶನಿವಾರ ಮುಂಜಾನೆ ಮಹತ್ವದ ಕಾರ್ಯಾಚರಣೆ ನಡೆಸಿ ಮಾದಕ ಜಾಲದ ಇಬ್ಬರು ಆರೋಪಿಗಳನ್ನು ಬಂಧಿ ಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಲ್ಲಿ ಒಬ್ಬ ಆರೋಪಿಗೆ ಚಿತ್ರರಂಗದ ನಂಟಿ ರುವುದು ತಿಳಿದುಬಂದಿದೆ.

ಬಂಧಿತ ಆರೋಪಿಗಳಲ್ಲಿ ಒಬ್ಬ ಸುರತ್ಕಲ್ ಬಳಿಯ ಕಾನ ನಿವಾಸಿ 28 ವರ್ಷದ ಅಕೀಲ್ ನೌಶೀಲ್. ಈತ ಹಿಂದೆ ವಿದೇಶದಲ್ಲಿ ಸೆಕ್ಯುರಿಟಿ ಆಫಿಸರ್ ಆಗಿ ಕಾರ್ಯ ನಿರ್ವಹಿ ಸುತ್ತಿದ್ದ. ವರ್ಷದ ಹಿಂದೆ ಭಾರತಕ್ಕೆ ಮರಳಿದ್ದು, ನಿಖರ ಉದ್ಯೋಗ ಇರಲಿಲ್ಲ.

ಮತ್ತೊಬ್ಬ ಆರೋಪಿ ಕುಳಾಯಿ ನಿವಾಸಿ 30 ವರ್ಷದ ಕಿಶೋರ್ ಅಮನ್ ಶೆಟ್ಟಿ. ಡ್ಯಾನ್ಸರ್ ಮತ್ತು ಕೊರಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದ ಈತನಿಗೆ ಮುಂಬಯಿ ಮತ್ತು ಬೆಂಗಳೂರಿನ ಚಿತ್ರರಂಗದ ನಂಟಿದೆ.
ಖಾಸಗಿ ವಾಹಿನಗಳ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದ ಈತ ಸಿನಿಮಾದಲ್ಲಿಯೂ ನಟಿಸಿದ್ದನು.


ಆರೋಪಿಗಳಿಬ್ಬರು ಜೊತೆಯಾಗಿ ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದು ಮಾತ್ರವಲ್ಲದೆ ಮಾದಕ ವ್ಯಸನಿಗಳೂ ಆಗಿದ್ದರು. ಶನಿವಾರ ಮುಂಜಾನೆ ಪೊಲೀಸ ರು ಕದ್ರಿ ಪದವುನಲ್ಲಿ ದಾಳಿ ನಡೆಸಿದ ವೇಳೆ ಆರೋಪಿಗಳು ಒಂದೇ ಮೋಟಾರು ಬೈಕ್ನಲ್ಲಿ ಸಿಕ್ಕಿಬಿದ್ದಿದ್ದಾರೆ.

ಬಂಧಿತರಿಂದ ನಿಷೇಧಿತ ಪೌಡರ್ ರೂಪ ದಲ್ಲಿದ್ದ ಎಂಡಿಎಂಎ ಮಾದಕ ವಸ್ತುವನ್ನು ವಶ ಪಡಿಸಿಕೊಳ್ಳಲಾಗಿದ್ದು, ಅದರ ಜೊತೆಗೆ ಮೋಟಾರು ಬೈಕ್, ಎರಡು ಮೊಬೈಲ್ ಫೋನ ಗಳನ್ನು ಸ್ವಾಧೀನ ಪಡಿಸಿಕೊಳ್ಳಲಾ ಗಿದೆ. ಇವುಗಳ ಒಟ್ಟು ಮೌಲ್ಯ ರೂ.1ಲಕ್ಷ
ಎಂದು ಅಂದಾಜಿಸಲಾಗಿದೆ. ಇವರಿಬ್ಬರ ಮೇಲೆ ಎನ್ ಡಿ ಪಿ ಎಸ್ ಕಾಯ್ದೆಯ ಅಡಿ ಯಲ್ಲಿ ಇಕಾನಮಿಕ್ ಆ್ಯಂಡ್ ನಾರ್ಕೋಟಿಕ್ ಕ್ರೈಮ್ ಠಾಣೆಯಲ್ಲಿ ಕೇಸು ದಾಖಲಿಸಲಾ ಗಿದೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ನಂತರ ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಸುದ್ದಿ ಗೋಷ್ಠಿ ಯಲ್ಲಿ ತಿಳಿಸಿದ್ದಾರೆ.

ಸಿಸಿಬಿ ಇನ್ಸ್ಪೆಕ್ಟರ್ ಶಿವಪ್ರಕಾಶ್ ಆರ್. ನಾಯಕ್, ನಾರ್ಕೋಟಿಕ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಮಕೃಷ್ಣ, ಸಿಸಿಬಿ ಸಬ್ ಇನ್ಸ್ಪೆಕ್ಟರ್ ಕಬ್ಬಾಳ್ ರಾಜ್ ಮತ್ತು ಸಿಬ್ಬಂದಿ ಅರೋಪಿಗಳಿಗಾಗಿ ಜಂಟಿ ಕಾರ್ಯಾಚರಣೆ ನಡೆಸಿದ್ದರು.

ಇದೇ ವೇಳೆ ಬಂಧಿತ ಆರೋಪಿಗಳು ವಿದ್ಯಾರ್ಥಿಗಳನ್ನೆ ಗುರಿಯಾಗಿಸಿಕೊಂಡು
ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿಯನ್ನೂ ಪೊಲೀಸ್ ಆಯುಕ್ತರು ನೀಡಿದ್ದಾರೆ.

 
 
 
 
 
 
 
 
 
 
 

Leave a Reply