ನಿರೂಪಕಿ ಅನುಶ್ರೀ ವಿಚಾರಣೆ ಅಂತ್ಯ

ಮಂಗಳೂರು: ಡ್ರಗ್ಸ್ ಕೇಸ್ ಪ್ರಕರಣಕ್ಕೆ ಸಂಬಂಧಿಸಿ ಅನುಶ್ರೀಗೆ ಸಿಸಿಬಿ ನೋಟಿಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಖ್ಯಾತ ನಿರೂಪಕಿ ಶನಿವಾರ ಬೆಳಗ್ಗೆ ವಿಚಾರಣೆಗೆ ಹಾಜರಾಗಿದ್ದಾರೆ.


ಶುಕ್ರವಾರ ಬೆಳಗ್ಗೆ 11 ಗಂಟೆಗೆ ಮಂಗಳೂರು ಸಿಸಿಬಿ ಕಚೇರಿಗೆ ಬರುತ್ತೇನೆ ಎಂದು ಹೇಳಿದ್ದ ಅನುಶ್ರೀ ಬರಲೇ ಇಲ್ಲ. ಇಂದು ಬೆಳಗ್ಗೆ ಹಾಜರಾಗಿದ್ದು, ಪಣಂಬೂರು ಠಾಣೆಯಲ್ಲಿ ಸಿಸಿಬಿ ಪೊಲೀಸರು ಮೂರುವರೆ
ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.

ಈಗಾಗಲೇ ಡ್ರಗ್ಸ್ ಪ್ರಕರಣದಲ್ಲಿ ಡ್ಯಾನ್ಸರ್, ಬಾಲಿವುಡ್ ನಟ ಕಿಶೋರ್ ಅಮನ್ ಶೆಟ್ಟಿ ಮತ್ತು ಕೋರಿಯೋಗ್ರಫರ್ ತರುಣ್ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ವಿಚಾರಣೆಯಲ್ಲಿ ಅನುಶ್ರೀ ಹೆಸರು ಬಾಯ್ಬಿಟ್ಟಿದ್ದ ಆರೋಪಿಗಳು, ತಾವು ಆಯೋಜಿಸಿದ್ದ ಪಾರ್ಟಿಯಲ್ಲಿ ಅನುಶ್ರೀ ಪಾಲ್ಗೊಂಡಿದ್ದಳು ಎಂದಿದ್ದರು.

ಈ ಕಾರಣಕ್ಕೆ ಗುರುವಾರ ರಾತ್ರಿ ಮಂಗಳೂರಿನಿಂದ ಬೆಂಗಳೂರಿಗೆ ಆಗಮಿಸಿದ್ದ ಸಿಸಿಬಿ ಪೊಲೀಸ್ ತಂಡ ಅನುಶ್ರೀಗೆ ಸಮನ್ಸ್ ಜಾರಿ ಮಾಡಿದ್ದರು.

ಶನಿವಾರ ಬೆಳಗ್ಗೆ ಮಂಗಳೂರು ಹೊರವಲಯದಲ್ಲಿರುವ ಪಣಂಬೂರು ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು. ಸದ್ಯ ವಿಚಾರಣೆ ಅಂತ್ಯಗೊಂಡ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನನಗೆ ಕಿಶೋರ್ ಕೇವಲ 6 ತಿಂಗಳ ಕಾಲ ಕೋರಿಯೋಗ್ರಾಫರ್ ಆಗಿದ್ದರು. ಅವರಿಂದ ತರುಣ್ ನ ಪರಿಚಯವಾಗಿತ್ತು ಅಷ್ಟೇ, ಡ್ರಗ್ಸ್ ವಿಷಯಕ್ಕೂ ನನಗೂ ಸಂಬಂಧವಿಲ್ಲ. ಪೋಲಿಸರು ಡ್ರಗ್ಸ್ ಪ್ರಕರಣದಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದರೆ , ನನ್ನ ಸಹಕಾರ ಇದ್ದೇ ಇರುತ್ತದೆ ಎಂದಿದ್ದಾರೆ.

 
 
 
 
 
 
 
 
 
 
 

Leave a Reply