ಎಕೆಎಮ್‌ಎಸ್ ಬಸ್ ಮಾಲಕನ ಕಚೇರಿಗೆ ನುಗ್ಗಿ ಹತ್ಯೆಗೆ ವಿಫಲ ಯತ್ನ

ಹಾಡುಗಲೇ ಬಸ್ ಮಾಲಕನ ಕಛೇರಿಗೆ ನಾಲ್ವರು ಅಪರಿಚಿತರು ಮಾರಕಾಸ್ತ್ರ ದೊಂದಿಗೆ ನುಗ್ಗಿ, ಬೆದರಿಸಿ ಹೋದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ಮಣಿಪಾಲ ಲಕ್ಷ್ಮೀಂದ್ರ ನಗರದಲ್ಲಿ ಕಾರ್ಯಚರಿಸುತ್ತಿರುವ ಎಕೆಎಮ್‌ಎಸ್ ಬಸ್‌ನ ಕಛೇರಿಗೆ ಕಂದು ಬಣ್ಣದ ಡಸ್ಟರ್ ಕಾರಿನಲ್ಲಿ ಬಂದ ದುಷ್ಕರ್ಮಿಗಳು ತಲವಾರಿನೊಂದಿಗೆ ಬಂದಿದ್ದರು ಎನ್ನಲಾಗಿದೆ.


ಕಛೇರಿಯಲ್ಲಿ ಏಳೆಂಟು ಮಂದಿ ಬಸ್ ಮಾಲಕನ ಗೆಳೆಯರು ಇದ್ದ ಕಾರಣ ದುಷ್ಕರ್ಮಿಗಳು ಬೆದರಿಸಿ ತೆರಳಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ.

ಬಸ್ ಮಾಲಕ ಸೈಪುದ್ದೀನ್ ಹಲವಾರು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಹಿನ್ನಲೆಯಲ್ಲಿ ಜಾಮೀನಿನ ಮೇಲೆ ಹೊರಗಿ ದ್ದಾನೆ. ಮಣಿಪಾಲ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ದುಷ್ಕರ್ಮಿಗಳು ಬಂದಿದ್ದ ಕಾರು ಮೂಡುಬೆಳ್ಳೆ ಕಡೆ ಪರಾರಿಯಾಗಿದೆಂದು ಮೂಲಗಳಿಂದ ತಿಳಿದುಬಂದಿದೆ.

 
 
 
 
 
 
 
 
 
 
 

Leave a Reply