ಕಾರ್ಕಳದಲ್ಲಿ ಕೋವಿಡ್ ಜಾಗೃತಿ ಅಭಿಯಾನ

ಪೋಲಿಸ್ ಅರಕ್ಷಕರ ಠಾಣೆ ಕಾರ್ಕಳ, ರೋಟರಿ ಆನ್ಸ್ ಮತ್ತು ರೋಟರಾಕ್ಟ್ ಸಂಸ್ಥೆ ಕಾರ್ಕಳ ಜಂಟಿ ಆಶ್ರಯದಲ್ಲಿ ಕೊರೊನಾ ಮುನ್ನೆಚ್ಚರಿಕೆ ವಹಿಸುವುದರ ಬಗ್ಗೆ ಜಾಗೃತಿ ಕರಪತ್ರಗಳನ್ನು ಮತ್ತು ಇದಕ್ಕೆ ಸಂಬಂಧಿಸಿದ ಪೋಸ್ಟರ್, ಸ್ಟಿಕರ್ ಗಳನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಠಾಣೆಯ ಅಧಿಕಾರಿ ಸಂಪತ್ ಕುಮಾರ್ ವಹಿಸಿದ್ದರು. ನಗರ ಠಾಣೆಯ ಉಪನಿರೀಕ್ಷಕ ದಾಮೋದರ್ ಮತ್ತು ಗ್ರಾಮಾಂತರ ಠಾಣೆಯ ಉಪನಿರೀಕ್ಷಕ ನಾಸಿರ್ ಹುಸೇನ್, ರೋಟರಾಕ್ಟ್ ಅಧ್ಯಕ್ಷ ರಾಹುಲ್ ರಾಜೇಶ್, ಬಾಲಕೃಷ್ಣ, ಡಿ.ಆರ್. ಆರ್ ಪ್ರಶಾಂತ್, ರೋಟರಿ ಕಾರ್ಯದರ್ಶಿ ಸಮೀರ್ ಉಪಸ್ಥಿತರಿದ್ದರು.ರೋಟರಿ ಆನ್ಸ್ ಅಧ್ಯಕ್ಷೆ ರಮಿತಾ ಶೈಲೇಂದ್ರ ಸ್ವಾಗತಿಸಿ, ಶಶಿಕಲಾ ಗೌಡ ವಂದಿಸಿದರು. ಸುಮಾ ನಾಯಕ್ ನಿರೂಪಿಸಿದರು. ಕಾರ್ಕಳದ ಬಸ್ ಸ್ಟ್ಯಾಂಡ್, ಜೋಡುರಸ್ತೆ, ಬಂಡಿಮಠ ಮುಂತಾದ ಕಡೆಗಳಲ್ಲಿ ಜಾಗೃತಿ ಮೂಡಿಸಲಾಯಿತು.

 
 
 
 
 
 
 
 
 
 
 

Leave a Reply