ಕಾಪು: ಕಾಪು ಜನಾರ್ಧನ ದೇವಸ್ಥಾನದಲ್ಲಿ ಟೀಮ್ ಮೋದಿ ಕಾಪು ವತಿಯಿಂದ ಆಯೋಜಿಸಿದ್ದ ಹೂವಿನ ಪೂಜೆ ಸಂದರ್ಭದಲ್ಲಿ ಕಾಪು ಬಿಜೆಪಿ ಪ್ರಭಾರಿಗಳಾಗಿ ನಿಯುಕ್ತಿಗೊಂಡ ಯಶ್ ಪಾಲ್ ಸುವರ್ಣರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಲಾಲಾಜಿ ಮೆಂಡನ್, ಬಿಜೆಪಿ ಮಂಡಲ ಆಧ್ಯಕ್ಷ ಅಲೆವೂರು ಶ್ರೀಕಾಂತ ನಾಯಕ್ , ಜ್ಯೋತಿಷ್ಯ ಶಾಸ್ತ್ರಜ್ಞ ಪ್ರಕಾಶ್ ಅಮ್ಮಣ್ಣಾಯ, ಜಿಲ್ಲಾ ಪಂಚಾಯತ್ ಸದಸ್ಯ ಗೀತಾಂಜಲಿ ಸುವರ್ಣ, ಸಂಘದ ಅಧ್ಯಕ್ಷ ಯೋಗೀಶ್ ಪೂಜಾರಿ, ಕಾರ್ಯದರ್ಶಿ ಲಕ್ಷ್ಮೀಕಾಂತ್ ಕೆ. ಹಾಗೂ ಸದಸ್ಯರು ಉಪಸ್ಥಿತರಿದ್ದರು.