ವಿದ್ಯೆ ನೀಡಿದ ಗುರುಗಳಿಗೆ ಗೌರವಾರ್ಪಣೆ

ಉಡುಪಿ : ಶ್ರೀ ವಿಘ್ನೇಶ್ವರ ಪ್ರಿಂಟರ್ಸ್ ಮಲ್ಪೆ ಹಾಗೂ 1986 – 87 ನೇ ವರ್ಷ ದ ಹತ್ತನೇ ತರಗತಿಯ ಹಳೆ ವಿದ್ಯಾರ್ಥಿಗಳಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ತಮಗೆ ವಿದ್ಯೆ ನೀಡಿದ ಗುರುಗಳಿಗೆ ಗೌರವಾರ್ಪಣೆ ಮಾಡಲಾಯಿತು.

ಶಾಂತಿ ಟಿ ಹೆಗಡೆ, ನಿವೃತ್ತ ವೃತ್ತಿ ಶಿಕ್ಷಕಿ ಮತ್ತು ಧೋರತಿ ಕೋಟ್ಯಾನ್ ನಿವೃತ್ತ ದೈಹಿಕ ಶಿಕ್ಷಕಿ, ಸರಕಾರಿ ಪ್ರೌಢ ಶಾಲೆ ಫಿಶರೀಸ್ ಮಲ್ಪೆ ಇವರಿಗೆ ಅವರ ಸ್ವಗೃಹ ದಲ್ಲಿ ಗುರುವಂದನೆಯನ್ನು ಅರ್ಪಿಸಲಾಯಿತು.

ಹಳೆ ವಿದ್ಯಾರ್ಥಿ ಹಾಗೂ ವಿಘ್ನೇಶ್ವರ ಪ್ರಿಂಟರ್ಸ್ ಮಾಲಕ ಎಮ್ ಮಹೇಶ್ ಕುಮಾರ್ ಹಳೆ ವಿದ್ಯಾರ್ಥಿ ಗಳು ಹಾಗೂ ಉದ್ಯಮಿ ಚಿತ್ರ ಕುಮಾರ್, ಲಕ್ಷ್ಮೀಶ ಬಂಗೇರ, ವಿನಯ ಪಡುಕರೆ,ಶಿವರಾಮ್ ಟಿ ಸುವರ್ಣ, ರೋಹಿಣಿ,ಇಂದಿರಾ, ವಾಣಿ, ಮೀನಾ ನಾಯರ್,ಸರೋಜಿನಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮವು ಸತತ 13 ವರ್ಷಗಳಿಂದ ನಡೆದುಕೊಂಡು ಬರುತ್ತಿದೆ.

 
 
 
 
 
 
 
 
 
 
 

Leave a Reply