ಲಸಿಕೆಯನ್ನು ಪ್ರತೀ ಗ್ರಾಮದ ಸಂಘ ಸಂಸ್ಥೆಯ ಮೂಲಕ ವಿತರಣೆ ಮಾಡಿ – ವಿಜಯ ಕೊಡವೂರು

ಉಡುಪಿ: ಲಸಿಕೆಯನ್ನು ಪ್ರತೀ ಗ್ರಾಮದ ಸಂಘ – ಸಂಸ್ಥೆಯ ಮೂಲಕ ಲಸಿಕೆ ವಿತರಣೆ ಮಾಡಬೇಕು ಎಂದು ಉಡುಪಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ್ ಉಡುಪ ಹೆಚ್ ಗೆ ಕೆ ವಿಜಯ್ ಕೊಡವೂರು ಮನವಿ ಸಲ್ಲಿಸಿದರು.

ಉಡುಪಿಯಲ್ಲಿ ಲಸಿಕೆ ವಿತರಣೆ ಆಗುತ್ತಿರುವುದು ತುಂಬಾ ಸಂತೋಷದ ವಿಷಯ ಆದರೆ ತುಂಬಾ ಜನರಿಗೆ ಲಾಕ್ ಡೌನ್ ಕಾರಣ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯಲು ಬಸ್ಸು, ರಿಕ್ಷಾದ ವ್ಯವಸ್ಥೆ ಇಲ್ಲದ ಕಾರಣ ಅನೇಕ ಜನರು ಲಸಿಕೆ ಪಡೆಯಲು ಸಾಧ್ಯವಾಗಿಲ್ಲ.

ಇನ್ನು ಮುಂದಿನ ದಿನಗಳಲ್ಲಿ ಪ್ರತೀ ಗ್ರಾಮದ ಸಂಘ ಸಂಸ್ಥೆಗಳ ಮೂಲಕ ಲಸಿಕೆಯನ್ನು ನೀಡಿದರೆ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆಯನ್ನು ನೀಡಬಹುದು ಮತ್ತು ಸ್ಥಳೀಯವಾಗಿ ಲಸಿಕೆ ಸಿಕ್ಕಿದರೆ ನಾಗರಿಕರಿಗೆ ಸುಲಭವಾಗಿ ಲಸಿಕೆಯನ್ನು ಪಡೆಯಬಹುದು ಎಂದು ಕೆ ವಿಜಯ್ ಕೊಡವೂರು ಮನವಿ ಸಲ್ಲಿಸಿದರು.

 

 
 
 
 
 
 
 
 
 
 
 

Leave a Reply