ಮೋದಿಯ ಹೆಜ್ಜೆ ಗುರುತಿನಲ್ಲಿ ನಡೆಯೋಣ – ವಿಜಯ್ ಕೊಡವೂರು.

ನಮ್ಮ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ನಿಮಿತ್ತ ಕೊಡವೂರಿನ ಕಾರ್ಯಕರ್ತರು ಮತ್ತು ಹಿರಿಯ ನಾಗರಿಕರು ಸೇರಿ ಕೊಡವೂರು ವಾರ್ಡಿನಲ್ಲಿರುವಂತಹ ಎಲ್ಲಾ ಬಸ್ ನಿಲ್ದಾಣಗಳನ್ನು ನೀರಿನ್ನು ಹಾಕಿ ಸ್ವಚ್ಛ ಸುಂದರಗೊಳಿಸುವ ಮುಖಾಂತರ ಪ್ರಯಾಣಿಕರಿಗೆ ಒಳ್ಳೆಯ ವಾತಾವರಣ ಮಾಡಲಾಗಿದೆ.ಅನೇಕ ಕಾರ್ಯಕರ್ತರು ಮತ್ತು ಹಿರಿಯ ನಾಗರಿಕರು ಭಾಗವಹಿಸುವುದರ ಮುಖಾಂತರ ಈ ಕಾರ್ಯವಾಗಿದೆ.

ಈ ಸಂದರ್ಭದಲ್ಲಿ ಅಜಿತ್ ಕುಮಾರ್ ಕೊಡವೂರು,ಪ್ರಶಾಂತ್ ಕೊಡವೂರು, ಕೃಷ್ಣ ಅಮೀನ ಮೂಡುಬೆಟ್ಟು,ಕೆ ಸುಂದರ ಪಾಲನ್, ಭಾಸ್ಕರ್ ಶೇರಿಗಾರ್,ಚಂದ್ರಕಾಂತ್ , ಸಂದೇಶ,ಕಿಶನ್ ಶೆಟ್ಟಿ,ಸುದೀಪ್,ವರುಣ್ ಮತ್ತಿತರರು ಹಾಜರಿದ್ದರು.

ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದ ಎಲ್ಲರಿಗೂ ನಗರಸಭೆ ಸದಸ್ಯರಾದ ಕೆ ವಿಜಯ್ ಕೊಡವೂರು ಧನ್ಯವಾದವನ್ನು ಸಲ್ಲಿಸಿದರು.

 
 
 
 
 
 
 
 
 
 
 

Leave a Reply