ನಿಸ್ವಾರ್ಥ ಕಾರ್ಯದಿಂದ ಮಾದರಿ ಗ್ರಾಮ ಸಂಕಲ್ಪ- ವಿಜಯ್ ಕೊಡವೂರು

ಉಡುಪಿ ನಗರ ಸಭೆಯಲ್ಲಿ ಒಂದಾಗಿರುವ ಕೊಡವೂರು ವಾರ್ಡಿನ ಕಾರ್ಯಕರ್ತರ ಅಭಿನಂದನಾ ಸಭೆ ದಿನಾಂಕ 26-2-23 ನೇ ಭಾನುವಾರ ಕೊಡವೂರಿನ ವಿಪ್ರ ಶ್ರೀ ಸಭಾಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ರಚನೆ ಮಾಡಿಕೊಂಡು ಆ ಮುಖಾಂತರ ಕೊಡವೂರು ಗ್ರಾಮವನ್ನು ಪೂರ್ತಿ ಸರ್ವೆ ನಡೆಸಿ ಆ ಸರ್ವೆಯಲ್ಲಿ ಬಂದ ಪ್ರಕಾರ ಒಟ್ಟು ಮನೆಗಳು 792, ಒಟ್ಟು ಕೃಷಿಕರು 51, ಬಾವಿಗಳ ಸಂಖ್ಯೆ 432, ನಿರುಪಯುಕ್ತ ಬಾವಿ 90, ಹೀಗೆ ಕೊಡವೂರಿನ ಸಮಸ್ಯೆ ಸವಾಲು ಮತ್ತು ಅಪೇಕ್ಷೆಗಳನ್ನು ತಿಳಿಯುವಂತ ಪ್ರಯತ್ನ ನಡೆದ ನಂತರ ಇದಕ್ಕೆ ಉತ್ತರಕೊಡಲು ಕೇವಲ ನಗರಸಭೆ ಸದಸ್ಯರಿಂದ ಸಾಧ್ಯವಿಲ್ಲ ಎಲ್ಲಾ ಕಾರ್ಯಕರ್ತರಿಗೆ ಕಾರ್ಯ ನೀಡಿದರೆ ಮಾತ್ರ ಇದು ಮಾದರಿ ಗ್ರಾಮವನ್ನಾಗಿಸಲು ಸಾಧ್ಯತೆ ಇದೆ ಎಂದರಿತು ಒಂದೊಂದು ವಿಚಾರಕ್ಕೆ ಒಂದೊಂದು ಸಮಿತಿಯನ್ನು ರಚಿಸಿ ಒಟ್ಟು 17 ಸಮಿತಿಗಳನ್ನು ರಚಿಸಿ ಆ ಸಮಿತಿಯ ಮುಖಾಂತರ ಸಮಸ್ಯೆಗಳಿಗೆ ನ್ಯಾಯ ಕೊಡುವಂತ ಪ್ರಯತ್ನ ಆಗಿದೆ.ಈ ಮುಖಾಂತರ ಕೇಂದ್ರ, ರಾಜ್ಯ ,ನಗರಸಭೆಯ ಎಲ್ಲಾ ಯೋಜನೆಗಳನ್ನು ಎಲ್ಲಾ ಇಲಾಖೆಗಳಿಂದಲೂ ಕಾರ್ಯಕ್ರಮಗಳನ್ನು ಆಯೋಜಿಸಿ ಜನರಿಗೆ ತಿಳಿಸುವಂತದ್ದು ಆಗಿವೆ. ಅದೇ ರೀತಿ ಕೇವಲ ಸರಕಾರದಿಂದ ಮಾತ್ರವಲ್ಲದೆ ನಾಗರಿಕರಿಂದಲೂ ಮನ ಒಲಿಸಿ ಸಾರ್ವಜನಿಕರಿಗೆ ಬೇಕಾಗುವಂತಹ ಹಲವಾರು ಸವಲತ್ತುಗಳನ್ನು ನೀಡುವ ಕಾರ್ಯ ನಡೆದಿದೆ. ಈ ಮೂಲಕ 39,77,155.00 ರೂಪಾಯಿ ಮೊತ್ತದ ಸೇವಾ ಕಾರ್ಯದ ಲೆಕ್ಕಾಚಾರವನ್ನು ನಾಗರಿಕರ ಮುಂದೆ ಇಡುವ ಪ್ರಯತ್ನವನ್ನು ಈ ದಿನದಲ್ಲಿ ಮಾಡಲಾಯಿತು.

ಅದೇ ರೀತಿ ಇಂದ್ರಾಣಿ ನದಿಯ ಸಮಸ್ಯೆ , ಕೆಮಿಕಲ್ ಆಹಾರ ಸಮಸ್ಯೆ,ಉದ್ಯೋಗದ ಸಮಸ್ಯೆ ಹಾಗೂ ಹಲವಾರು ಸಮಸ್ಯೆ ಮತ್ತು ಅದರ ಪರಿಹಾರದ ಬಗ್ಗೆ ಚರ್ಚಿಸಲಾಯಿತು. ಕೊಡವೂರು ವಾರ್ಡಿನಲ್ಲಿ 28 ಮನೆಗಳು ಮತಾಂತರ ಆಗಿರುವುದು ಅತೀ ದೊಡ್ಡ ಸಮಸ್ಯೆ ಆಗಿದೆ, ಪ್ರಸ್ತುತವಾಗಿ 3 ಕಾಲೇಜು ವಿದ್ಯಾರ್ಥಿನಿಯರು ಮತಾಂತರ ಆಗಿರುವುದು ನಡೆಯುತಿದ್ದು, ಇದನ್ನು ಸರಿಪಡಿಸಬೇಕಾದರೆ ಒಂದು ತಂಡದ ಅವಶ್ಯ ಇದೆ ಧರ್ಮ ಶಿಕ್ಷಣದ ಅವಶ್ಯ ಇದ್ದು ಅದಕ್ಕೂ ಒಂದು ತಂಡವನ್ನು ರಚನೆ ಮಾಡಿ ಕಾರ್ಯ ನಡೆಯುತ್ತಿದೆ.

ಮುಂದಿನ ದಿನಗಳಲ್ಲಿ ಎಲ್ಲಾ ಸಮಸ್ಯೆಗಳಿಗೆ ಉತ್ತರ ಕೊಡಬೇಕು ಅನ್ನುವ ದೃಷ್ಟಿಯಿಂದ ಎಲ್ಲಾ ಸಮಸ್ಯೆಗಳಿಗೂ ಸಮಿತಿಯನ್ನು ರಚನೆ ಮಾಡಿ ಕಾರ್ಯ ನಿರ್ವಹಿಸಲಾಗುತ್ತಿದೆ ಈ ಕಾರ್ಯ ದೇಶಕ್ಕೆ ರಾಜ್ಯಕ್ಕೆ ಮಾದರಿ ಎಂದು ಕೆ.ಎಂ.ಎಫ್ ನ ಮಾಜಿ ಅಧ್ಯಕ್ಷರಾದ ರವಿರಾಜ್ ಹೆಗ್ಡೆ ಅವರು ನುಡಿದರು.

ಈ ಸಂದರ್ಬದಲ್ಲಿ ವಿಜಯ್ ಕೊಡವೂರು ಮಾತನಾಡಿ ಈ ಸೇವೆಯನ್ನು ರಾಜಕೀಯ ಆಸೆಗೋಸ್ಕರ ಅಲ್ಲ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಸ್ಥಾನಕ್ಕಾಗಿ ಅಲ್ಲ, ಸೇವೆ ಎನ್ನುವುದು ನಮ್ಮ ಜೀವನದ ಅಂಗವಾಗಿರಬೇಕು ಆ ದೃಷ್ಟಿಯಿಂದ ಈ ಸೇವೆಯನ್ನು ಮಾಡಲು ಸಾಧ್ಯವಾಗಿದೆ.
ಮುಂದಿನ ದಿನಗಳಲ್ಲಿ ಹಿರಿಯರು ಯಾವ ಜವಾಬ್ದಾರಿ ಕೊಡುತ್ತಾರೆ ಎಲ್ಲವನ್ನೂ ಮಾಡಲು ಸಿದ್ದನಿದ್ದೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೊಡವೂರು ಸಿ.ಎ ಬ್ಯಾಂಕಿನ ಅಧ್ಯಕ್ಷರಾದ ನಾರಾಯಣ್ ಬಲ್ಲಾಳ್, ಕೊಡವೂರು ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಕಾಳು ಶೇರಿಗಾರ್, ಶ್ರೀ ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸದಸ್ಯರಾದ ಚಂದ್ರಾವತಿ, ಹಿಂದೂ ಯುವ ಸೇನೆ ಉಡುಪಿ ಜಿಲ್ಲೆ ಅಧ್ಯಕ್ಷರಾದ ಅಜಿತ್ ಕೊಡವೂರು,ದಿವ್ಯಾಂಗ ರಕ್ಷಣಾ ಸಮಿತಿ ಅಧ್ಯಕ್ಷರಾದ ಹರೀಶ್,ವಾಸ್ ವೆಲ್ಡ್ ಫರೆರಾ, ರಮೇಶ್ ಮಾಸ್ಟರ್ ಕೊಪ್ಪಳತೋಟ,
ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ಅಧ್ಯಕ್ಷರಾದ ಅಶೋಕ್ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply