ವಿದ್ಯಾಪೋಷಕ್ ಫಲಾನುಭವಿಯಿಂದ ದೇಣಿಗೆ

ಉಡುಪಿ : ಬೆಂಗಳೂರಿನಲ್ಲಿ ಸಿಂಜಿನ್ ಇಂಟರ್‌ನ್ಯಾಷನಲ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿ ದೀಪಕ್ ಕಾಮತ್,ಹಿರಿಯಡ್ಕ ಅಗಸ್ಟ್ 14ರಂದು ಕಚೇರಿಗೆ ಆಗಮಿಸಿ ರೂ 30000 ದೇಣಿಗೆಯನ್ನು ನೀಡಿದರು.

ವಿದ್ಯಾಪೋಷಕ್ ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್ ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್, ಜತೆ ಕಾರ್ಯದರ್ಶಿ ಎಚ್. ಎನ್. ಶೃಂಗೇಶ್ವರ, ಸದಸ್ಯ ಎಚ್. ಎನ್. ವೆಂಕಟೇಶ್ ಉಪಸ್ಥಿತರಿದ್ದರು. ಈತ ಪ್ರತಿವರ್ಷ ಸಂಸ್ಥೆ ಗೆ ದೇಣಿಗೆ ನೀಡುತ್ತಾ ಬಂದಿರುವುದು ಕೃತಜ್ಞತಾಭಾವದ ದ್ಯೋತಕವಾಗಿದೆ.

 
 
 
 
 
 
 
 
 
 
 

Leave a Reply