ಪ್ರಾಮಾಣಿಕತೆ ಮೆರೆದ ಯುವತಿ ವೀಣಾ ಬಾರಿಕೆರೆ

 ಕೋಟದ ಶ್ರೀ ಅಮೃತೇಶ್ವರಿ ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಬಂದಿದ್ದ ಗಂಗೊಳ್ಳಿಯ ಜಿ. ಸುರೇಶ್  ತಮ್ಮ ಚಿನ್ನದ ಬ್ರಾಸ್ಲೇಟ್ ಕಳೆದುಕೊಂಡಿದ್ದರು. ಕಳೆದುಹೋದ ಬ್ರಾಸ್ ಲೇಟ್ ವೀಣಾ ಬಾರಿಕೆರೆ ಇವರಿಗೆ ಸಿಕ್ಕಿದಾಗ ಪ್ರಾಮಾಣಿಕತೆ ಯಿಂದ ಅದನ್ನು ದೇವಸ್ಥಾನದ ಆಡಳಿತ ಮಂಡಳಿಯವರಿಗೆ ನೀಡಿದ್ದರು. ತನ್ಮಧ್ಯೆ ಸುರೇಶ್ ತಮ್ಮ ಬ್ರಾಸ್ ಲೈಟ್ ಹುಡುಕಾಟದಲ್ಲಿ ಮತ್ತೆ ದೇವಸ್ಥಾನಕ್ಕೆ ಬಂದು ಆಡಳಿತ ಮಂಡಳಿಯವರಲ್ಲಿ ವಿಚಾರಿಸಿದರು.
ಇದನ್ನರಿತ ದೇವಳದ ಧರ್ಮದರ್ಶಿ ಎ.ಸಿ ಕುಂದರ್ ಇವರ ಸಮಕ್ಷಮ ಜಿ. ಸುರೇಶ್ ಇವರಿಗೆ ಬ್ರಾಸ್ಲೇಟ್ ನೀಡ ಲಾಯಿತು.ವೀಣಾ ಬಾರಿಕೆರೆ ಇವರ ಪ್ರಾಮಾಣಿಕ ಕಳಕಳಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ
 
 
 
 
 
 
 
 
 
 
 

Leave a Reply