ವನಸುಮ ವೇದಿಕೆ ರಂಗಶಿಬಿರ ಸಮಾರೋಪ

ವನಸುಮ ವೇದಿಕೆ ಮತ್ತು ಶ್ರೀ ಶಿವಕುಮಾರ ಕಲಾಸಂಘ ಸಾಣೆಹಳ್ಳಿ ಸಹಯೋಗದಲ್ಲಿ ಒಂದು ತಿಂಗಳ ಪರ್ಯoತ ನಡೆದ ರಂಗತರಬೇತಿ ಶಿಬಿರ ನವೆಂಬರ್ 26ರಂದು ಕುಂಜಾರುವಿನಲ್ಲಿ ನಡೆಯಿತು. ಇಂಡಿಯ ಬುಕ್ ಆಫ್ ರೆಕಾರ್ಡ್ ಸಾಧಕ ಕಲಾವಿದ ರಮೇಶ್ ಬಂಟಕಲ್ ಸಮಾರoಭವನ್ನು ಉದ್ಘಾಟಿಸಿದರು. ಖ್ಯಾತ
ಹಾಸ್ಯಸಾಹಿತಿ ಚಂದ್ರಾವತಿ ಬಡ್ಡಡ್ಕ ಮುಖ್ಯ ಅಥಿತಿಯಾಗಿ ಉಪಸ್ಥಿತರಿದ್ದರು. ವೇದಕೆಯಲ್ಲಿ
ವನಸುಮ ವೇದಿಕೆ ಅಧ್ಯಕ್ಷ ಹಾಗೂ ಶಿಬಿರ ನಿರ್ದೇಶಕ ಬಾಸುಮ ಕೊಡಗು, ಖಜಾಂಜಿ
ಕಾವ್ಯವಾಣಿ ಕೊಡಗು, ಭಾವನಾ ಕಲಾವಿದರು ತಂಡದ ಕೀರ್ತಿ ಬೇಂಗ್ರೆ ಹಾಗೂ ನಿರ್ದೇಶಕ
ಜಯರಾಂ ನೀಲಾವರ ಉಪಸ್ಥಿತರಿದ್ದರು.

ಸಮಾರಂಭದ ಬಳಿಕ ಸಾಣೇಹಳ್ಳಿ
ಶಿವಸಂಚಾರ ಬೆಳ್ಳಿಹಬ್ಬದ ಪ್ರಯುಕ್ತ ಆಯೋಜಿಸಲಾದ ಈ ಶಿಬಿರದಲ್ಲಿ ಸಿದ್ಧವಾದ
ಸುಳಿವಾತ್ಮ ಎನ್ನೊಳಗೆ ನಾಟಕ ಪ್ರದರ್ಶನ ನಡೆಯಿತು. ಹೂಲಿ ಶೇಖರ್ ರಚಿಸಿದ ಈ
ನಾಟಕವನ್ನು ಬಾಸುಮ ಕೊಡಗು ನಿರ್ದೇಶನ ಮಾಡಿದ್ದು, ದೃಶಾ ಕೊಡಗು
ಸಂಗೀತ ನಿರ್ದೇಶನ ಮಾಡಿರುತ್ತಾರೆ. ಜಯರಾಂ ನೀಲಾವರ್ ಬೆಳಕಿನ ಸಂಯೋಜನೆ
ನಿರ್ವಹಿಸಿದರು.

 
 
 
 
 
 
 
 
 
 
 

Leave a Reply