ಮಾಜಿ ನಗರಸಭಾ ಸದಸ್ಯೆ ಸಮಾಜ ಸೇವಕಿ ವನಜಾಕ್ಷಿ ಶಾಂತಾರಾಮ್ ನಿಧನ

ಉಡುಪಿ: ಬನ್ನಂಜೆ ನಿವಾಸಿ ಸಮಾಜ ಸೇವಕಿ ಹಾಗೂ ಮಾಜಿ ನಗರಸಭಾ ಸದಸ್ಯೆ ವನಜಾಕ್ಷಿ ಶಾಂತಾರಾಮ್ ಶುಕ್ರವಾರ ನಿಧನರಾದರು. 87 ವರ್ಷ ವಯಸ್ಸಾಗಿದ್ದ ಇವರು ಐವರು ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

 ಉಡುಪಿ ಮಹಿಳಾ ಗ್ರಾಹಕರ ಸಂಘದ ಸ್ಥಾಪಕ ಆಡಳಿತ ಮಂಡಳಿ ಸದಸ್ಯರಾಗಿದ್ದ ಅವರು ಉಡುಪಿ ತಾಲೂಕಿನ ಬಿಜೆಪಿ ಮಹಿಳಾ ಮೋರ್ಚದ ಅಧ್ಯಕ್ಷರಾಗಿದ್ದರು. 1985 ರಿಂದ 1995 ರವರೆಗೆ 2 ಬಾರಿ ಉಡುಪಿ ನಗರ ಸಭೆಯ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದರು.ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ಸ್ಪಂದನ ವನಿತಾ ಸಮಾಲೋಚನ ಕೇಂದ್ರದ ಸದಸ್ಯೆಯಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಜಿಲ್ಲೆಯ ಹಲವಾರು ಧಾರ್ಮಿಕ ಹಾಗೂ ಸಮಾಜಮುಖಿ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

 ಉಡುಪಿ ಶಾಸಕ ಕೆ. ರಘುಪತಿ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್, ಬಿಜೆಪಿ ನಗರ ಅಧ್ಯಕ್ಷ ಮಹೇಶ್ ಠಾಕೂರ್ ಸಂತಾಪ ಸೂಚಿಸಿದ್ದಾರೆ.

 
 
 
 
 
 
 
 
 
 
 

Leave a Reply