ಮಂಗಳೂರು ವಿವಿ ಈಜು ಸ್ಪರ್ಧಾಕೂಟ ಉದ್ಘಾಟನೆ

ಉಡುಪಿ : ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಆಶ್ರಯದಲ್ಲಿ ನಡೆದ ಮಂಗಳೂರು ವಿವಿ ಅಂತರ್ಕಾಲೇಜು ಪುರುಷರ ಮತ್ತು ಮಹಿಳೆಯರ ಈಜು ಸ್ಪರ್ಧಾಕೂಟವನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ನವೆಂಬರ್ 26 ರಂದು ಅಜ್ಜರಕಾಡಿನ ಜಿಲ್ಲಾ ಈಜುಕೊಳದ ಸಭಾಂಗಣದಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಉಡುಪಿ ಮತ್ತು ದ.ಕ ಜಿಲ್ಲಾ ಮೀನುಗಾರಿಕಾ ಒಕ್ಕೂಟದ ಅಧ್ಯಕ್ಷ ಯಶಪಾಲ್ ಎ ಸುವರ್ಣ, ಉಡುಪಿ Ln ಜೈ ದುರ್ಗಾ ಸ್ವಿಮ್ಮಿಂಗ್ ಕ್ಲಬ್ (ರಿ) ಇದರ ಅಧ್ಯಕ್ಷ ಗಂಗಾಧರ್ ಕಡೆಕಾರು, ಯುವಜನ ಸಭಲೀಕರಣ ಮತ್ತು ಕ್ರೀಡೆ ಇದರ ಸಹಾಯಕ ನಿರ್ದೇಶಕ ಡಾ.ರೋಷನ್ ಕುಮಾರ್ ಶೆಟ್ಟಿ, ಮಂಗಳೂರು ವಿವಿಯಿಂದ ಪಂದ್ಯದ ಪರಿವೀಕ್ಷಕರಾಗಿ ನಿಯೋಜನೆಗೊಂಡ ವಿ.ಸಿ ಪುತ್ತೂರು ಇದರ ದೈ.ಶಿಕ್ಷಣ ನಿರ್ದೇಶಕ ರವಿಶಂಕರ್ ಉಪಸ್ಥಿತರಿದ್ದರು.
ಈಜಿನಲ್ಲಿ ಇಂಡಿಯನ್ ಬುಕ್ಸ್ ಆಫ್ ರೆಕಾರ್ಡ್ ಹೋಲ್ಡರ್ ಹಾಗು ಉಚಿತವಾಗಿ ಈಜು ಕಲಿಸುವ ನಿಸ್ವಾರ್ಥಿ ಗಂಗಾಧರ್ ಜಿ ಕಡೆಕಾರು ಇವರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಚಾರ್ಯ ಡಾ. ಮಧುಸೂದನ್ ಭಟ್ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಗಣೇಶ್ ಕೋಟ್ಯಾನ್ ಸ್ವಾಗತಿಸಿ, ವಾಣಿಜ್ಯ ಉಪನ್ಯಾಸಕ ಹರಿಕೇಶವ್ ವಂದಿಸಿದರು. ವಾಣಿಜ್ಯ ಉಪನ್ಯಾಸಕ ರಾಘವೇಂದ್ರ ಜಿ.ಜಿ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply