ಉಡುಪಿ ಗ್ರಾಮಾಂತರ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ಗೋಪೂಜೆ

ನೀಲಾವರ : ಪ್ರಧಾನಿ ನರೇಂದ್ರ ಮೋದಿಜಿಯ 71 ನೇ ಜನ್ಮದಿನದ ಅಂಗವಾಗಿ ಸೇವೆ ಮತ್ತು ಸಮರ್ಪಣೆ ಅಭಿಯಾನದ ಪ್ರಯುಕ್ತ ಬಿಜೆಪಿ ಗ್ರಾಮಾಂತರ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷೆ ಸುನೀತಾ ಡಿಸೋಜಾ ಅಧ್ಯಕ್ಷತೆಯಲ್ಲಿ ನೀಲಾವರ ಗೋಶಾಲೆಯಲ್ಲಿ ಗೋವುಗಳಿಗೆ ಗೋಪೂಜೆ ಕಾರ್ಯಕ್ರಮ ನಡೆಸಲಾಯಿತು.

ಅಲ್ಲಿನ ಗೋವುಗಳಿಗೆ ಹಣ್ಣು ಹಾಗೂ ಒಂದು ಲೋಡ್ ಹುಲ್ಲನ್ನು ನೀಡಲಾಯಿತು. ಬಿಜೆಪಿ ಗ್ರಾಮಾಂತರ ಅಧ್ಯಕ್ಷೆ ವೀಣಾ ವಿ. ನಾಯ್ಕ್, ಪ್ರಧಾನ ಕಾರ್ಯದರ್ಶಿ ಗಣೇಶ್ ಕುಲಾಲ್, ಸಚಿನ್ ಪೂಜಾರಿ, ಅಲ್ಪ ಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರಾಜೇಶ್ರೀ ಮಸ್ಕರೆಹ್ನಸ್, ರಾಯಲ್ ಡಿಸೋಜಾ ಹಾಗೂ ಎಲ್ಲಾ ಸದಸ್ಯರು, ಚಾಂತಾರು ಪಂಚಾಯ್ತ್ ಅಧ್ಯಕ್ಷರಾದ ಮೀರಾ ಸದಾನಂದ್ ಪೂಜಾರಿ, ಸದಸ್ಯರಾದ ನಿತ್ಯಾನಂದ್ ಪೂಜಾರಿ, ದಿನೇಶ್ ದೇವಾಡಿಗ. ನೀಲಾವರ ಪಂಚಾಯ್ತ್ ಅಧ್ಯಕ್ಷ ಮಹೇಂದ್ರ ಕುಮಾರ್. ಗೋವಿಗಾಗಿ ಮೇವು ಇದರ ಸಂಚಾಲಕ ಪ್ರತ್ವಿರಾಜ್ ಶೆಟ್ಟಿ. ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

ಗಣೇಶ್ ಕುಲಾಲ್ ರವರು ಸ್ವಾಗತಿಸಿ ವೀಣಾ ನಾಯ್ಕ್ ಪ್ರಾಸ್ತವಿಕವಾಗಿ ಮಾತನಾಡಿದರು. 

ಪ್ರತ್ವಿರಾಜ್ ಶೆಟ್ಟಿ ಮಾತನಾಡಿ ಅಲ್ಪಸಂಖ್ಯಾತರಿಂದ ಗೋಪೂಜೆ ಹಾಗೂ ಗೋವುಗಳಿಗೆ ಮೇವು ಇದೇ ಮೊದಲ ಭಾರಿಯಾಗಿದೆ ಇದು ರಾಜ್ಯಕ್ಕಷ್ಟೇ ಅಲ್ಲ ಇಡೀ ದೇಶಕ್ಕೆ ಹೆಮ್ಮೆ ಪಡುವ ವಿಷಯವಾಗಿದೆ ಹಾಗೂ ಮಾದರಿಯಾಗಿದೆ ಎಂದು ವಿಶೇಷವಾಗಿ ಉಲ್ಲೇಖ ಮಾಡಿದರು ಸುನೀತಾ ಡಿಸೋಜಾ ಶುಭ ಹಾರೈಸಿ ವಂದಿಸಿದರು. ಬಂದವರೆಲ್ಲ ಗೋವುಗಳಿಗೆ ಹಣ್ಣು ನೀಡಿ ಖುಷಿ ಪಟ್ಟರು.

 
 
 
 
 
 
 
 
 
 
 

Leave a Reply