ಉಡುಪಿ ಜಿಲ್ಲಾ ರಂಗಮಂದಿರದ ಬಗ್ಗೆ ಒತ್ತಾಯ

ಉಡುಪಿ : ಜಿಲ್ಲೆಯ ನೂತನ ಉಸ್ತುವಾರಿ ಸಚಿವರಾಗಿರುವ ಕರ್ನಾಟಕ ಸರಕಾರದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನಿಲ್ ಕುಮಾರ್ ರನ್ನು ಜಿಲ್ಲೆಯ ಹಿರಿಯ ಹವ್ಯಾಸಿ ರಂಗ ಸಂಸ್ಥೆಯಾದ ರಂಗಭೂಮಿ (ರಿ.) ಉಡುಪಿ ಸಂಸ್ಥೆಯ ಪರವಾಗಿ, ಉಡುಪಿಯ ಶಾಸಕರು ಹಾಗೂ “ರಂಗಭೂಮಿ” ಸಂ‌ಸ್ಥೆಯ ಸದಸ್ಯರಾಗಿರುವ ಕೆ. ರಘುಪತಿ ಭಟ್ ಮತ್ತು ಸಂಸ್ಥೆಯ ಅಧ್ಯಕ್ಷ ಡಾ. ತಾಲ್ಲೂರು ಶಿವರಾಮ ಶೆಟ್ಟಿ ನೇತೃತ್ವದಲ್ಲಿ ಇಂದು ಆ. 9ರಂದು ಅಭಿನಂದನೆ ಸಲ್ಲಿಸಲಾಯಿತು. 

” ರಂಗಭೂಮಿ” ಸಂಸ್ಥೆಯ ಉಪಾಧ್ಯಕ್ಷರುಗಳಾದ ನಂದಕುಮಾರ್ ಎಂ. ಮತ್ತು ಭಾಸ್ಕರ ರಾವ್ ಕಿದಿಯೂರು, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯ ಶ್ರೀಪಾದ ಹೆಗಡೆ, ರವೀಂದ್ರ ಶೆಟ್ಟಿ ಕಡೆಕಾರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರಂಗಮಂದಿರದ ಬಗ್ಗೆ ಒತ್ತಾಯ ಮಾಡಲಾಯಿತು.

 
 
 
 
 
 
 
 
 
 
 

Leave a Reply