ಉಡುಪಿ ಜಿಲ್ಲಾ ಪ್ರವಾಸದಲ್ಲಿರುವ ಶ್ರೀರಾಮಸೇನೆಯ ಮುಖ್ಯಸ್ಥ ರಾದ ಪ್ರಮೋದ್ ಮುತಾಲಿಕ್ ರವರು ಇಂದು ವಿಶ್ವ ಹಿಂದೂ ಪರಿಷತ್ ನ ಮಾಜಿ ಜಿಲ್ಲಾಧ್ಯಕ್ಷರಾದ ರಾಘವೇಂದ್ರ ಆಚಾರ್ಯರನ್ನು ಭೇಟಿ ಮಾಡಿದರು. ಪ್ರಸ್ತುತ ಸಮಯದ ರಾಜಕೀಯ ಹಾಗೂ ಸಂಘಟಾತ್ಮಕವಾಗಿ ಧೀರ್ಘ ಚರ್ಚಿಸಲಾಯಿತು.ಈ ಸಮಯದಲ್ಲಿ ಶ್ರೀರಾಮಸೇನೆಯ ರಾಜ್ಯ ಪ್ರ ಕಾರ್ಯದರ್ಶಿ ಆನಂದ ಶೆಟ್ಟಿ, ಮಂಗಳೂರು ಜಿಲ್ಲಾಧ್ಯಕ್ಷ ಮೋಹನ್ ಭಟ್, ಉಡುಪಿ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು, ಪ್ರ ಕಾರ್ಯದರ್ಶಿ ಶರತ್ ಮಣಿಪಾಲ, ಹರೀಶ್ ಬೋಕ್ಕಪಟ್ನ, ಶ್ರೀನಿವಾಸ್ ರಾವ್ ಉಪಸ್ಥಿತರಿದ್ದರು.