ಕಳೆದುಕೊಂಡ ವ್ಯಾನಿಟಿ ಬ್ಯಾಗನ್ನು ವಾರಿಸುದಾರರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಯುವಕರು

ಉಡುಪಿಯ ಅಂಬಾಗಿಲು ಸಮೀಪ ಬಿದ್ದು ಸಿಕ್ಕಿದ್ದ ವ್ಯಾನಿಟಿ ಬ್ಯಾಗ್ ಒಂದನ್ನು ವಾರಿಸುದಾರರಿಗೆ ಒಪ್ಪಿಸಿ ಯುವಕರಿಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ. ಉಪನ್ಯಾಸಕಿ ಸುಜಾತ ಸುಧೀರ್ ಅವರು ಬೆಳಗ್ಗೆ ಕಾಲೇಜಿಗೆ ತೆರಳುವ ವೇಳೆ ತಮ್ಮ ವ್ಯಾನಿಟಿ ಬ್ಯಾಗನ್ನು ಕಳೆದುಕೊಂಡಿದ್ದರು. ವ್ಯಾನಿಟಿ ಬ್ಯಾಗಿನಲ್ಲಿ ಕೆಲವೊಂದು ಅಗತ್ಯ ದಾಖಲೆಗಳು, ಮೊಬೈಲ್ ಫೋನ್ ಹಾಗೂ ಸ್ವಲ್ಪ ಹಣವಿತ್ತು. ಈ ಬ್ಯಾಗ್ ಟೆಂಪೋ ಚಾಲಕರಾದ ಪವನ್ ಕುಲಾಲ್ ಬೈಲೂರು ಮತ್ತು ಗಣೇಶ್ ಬೈಲೂರು ಇವರಿಗೆ ಸಿಕ್ಕಿದ್ದು, ಬ್ಯಾಗ್ ಅನ್ನು ಉಪನ್ಯಾಸಕಿಗೆ ತಲುಪಿಸಿದ್ದಾರೆ. ಯುವಕರಿಬ್ಬರ ಪ್ರಾಮಾಣಿಕತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 
 
 
 
 
 
 
 
 
 
 

Leave a Reply