ಏಕಾಏಕಿ ಬಸ್‌ ಟಯರ್ ಬ್ಲಾಸ್ಟ್; ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ!

ಖಾಸಗಿ ಬಸ್‌ವೊಂದರ ಟಯರ್ ಏಕಾಏಕಿ ಬ್ಲಾಸ್ಟ್ ಆಗಿ ಭಾರೀ ಅನಾಹುತ ತಪ್ಪಿದ ಘಟನೆ ಇಲ್ಲಿನ ರಾ.ಹೆ.66 ತೆಕ್ಕಟ್ಟೆ ಕೆನರಾ ಬ್ಯಾಂಕ್ ಸಮೀಪ ನಡೆದಿದೆ.

ಬಸ್‌ ಕಾರ್ಕಳದಿಂದ ಕುಂದಾಪುರದ ಕಡೆಗೆ ಸಂಚರಿಸುತ್ತಿತ್ತು. ಖಾಸಗಿ ಬಸ್‌ನ ಮುಂಭಾಗದ ಟಯರ್ ಏಕಾಏಕಿ ಬ್ಲಾಸ್ಟ್ ಆಗಿ ರಸ್ತೆ ವಿಭಾಜಕವನ್ನು ಏರುವ ಸಾಧ್ಯತೆ ಹೆಚ್ಚಾಗಿದ್ದು, ಈ ಸಂದರ್ಭದಲ್ಲಿ ಬಸ್ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಭಾರೀ ಅನಾಹುತ ತಪ್ಪಿದೆ.

 
 
 
 
 
 
 
 
 
 
 

Leave a Reply