ಸ್ನಾನ ಮಾಡುತ್ತಿದ್ದ ಮೂವರು ಯುವಕರು ಹೊಳೆಯಲ್ಲಿ ಮುಳುಗಿ ಸಾವು

ಉಡುಪಿ: ಮೂವರು ಯುವಕರು ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮೂಡುಬೆಳ್ಳಗ್ರಾಮದ ಪಾಂಬೂರು ಕಬೇಡಿ ಎಂಬಲ್ಲಿ ರವಿವಾರ ಸಂಜೆ ನಡೆದಿದೆ.

ಮೃತರನ್ನು ಶಂಕರಪುರ ಸುಭಾಸ್ನಗರದ ರಿಝಾನ್(28), ಕ್ಯಾಲ್ವಿನ್ ಕಸ್ತಲಿನೋ(21) ಮತ್ತು ಜಾಬಿರ್(18) ಎಂದು ಗುರುತಿಸಲಾಗಿದೆ.ಈ ಮೂವರು ಹೊಳೆಯಲ್ಲಿ ಈಜುತ್ತಿದ್ದಾಗ ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಬಳಿಕ ಮುಳುಗು ತಜ್ಞರ ಸಹಾಯದಿಂದಾಗಿ ಮೃತದೇಹಗಳನ್ನು ಮೇಲಕ್ಕೆತ್ತಲಾಯಿತು. ಘಟನಾ ಸ್ಥಳಕ್ಕೆ ಶಿರ್ವ ಪೊಲೀಸರು ಭೇಟಿ ನೀಡಿದ್ದಾರೆ.  

 
 
 
 
 
 
 
 
 

Leave a Reply